ಧಾರವಾಡ prajakiran.com : ಪ್ರತಿಯೊಬ್ಬ ರಾಜಕಾರಣಿ ತನ್ನ ಕತ್ಯವ್ಯವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಸಮಸ್ಯೆಗಳೇ ಇರುವುದಿಲ್ಲ.
ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂದಿಸಲು ರಾಜಕಾರಣಿಗಳಿಗೆ ಆಗದಿರುವುದು ನೋವಿನ ಸಂಗತಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಅವರು ಶನಿವಾರ ಧಾರವಾಡದ ಅಣ್ಣಾ ಹಜಾರೆ ಚರಂತಿ ಮಠ ಗಾರ್ಡನ್ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಜೊತೆಗೆ ಮಾತನಾಡಿ, ಚರಂತಿ ಮಠ ಗಾರ್ಡನ್ ನಲ್ಲಿ ಔಟ್ ಪೊಲೀಸ್ ಸ್ಟೇಶನ್ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ, ಸ್ಥಳೀಯ ಜನತೆಯ ಸಮಸ್ಯೆಗಳಿದ್ದರೆ ಪ್ರತಿ ತಿಂಗಳಿಗೆ ಸ್ಥಳೀಯ ಜನರ ಸಭೆ ಕರೆದು ಚರ್ಚಿಸಿ, ನನ್ನ ಗಮನಕ್ಕೆ ತಂದರೆ ಅವುಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದು ಎಂದು ಅಭಯ ನೀಡಿದರು.
ಸಂಘದ ಗೌರವ ಅಧ್ಯಕ್ಷ ಶಿವಶಂಕರ ಹಂಪಣ್ಣವರ ಮಾತನಾಡಿ, ಬಸವರಾಜ ಹೊರಟ್ಟಿ ಅವರು 2009ರಲ್ಲಿ ಚರಂತಿಮಠ ಗಾರ್ಡನ್ ಆಗಬೇಕು ಎಂದು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದಾಗ ತಕ್ಷಣವೇ ಸ್ಪಂದಿಸಿದ್ದರು.
ಕಾನೂನು ಹೋರಾಟದ ಸಂದರ್ಭದಲ್ಲಿ ಕೂಡ ನೆರವಾಯಿತು. ನೇರ ನಡೆ, ನುಡಿಯ ರಾಜಕಾರಣಿಯನ್ನು ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ಹೇಳಿದರು.
ಗಾರ್ಡನ್ ಆವರಣದಲ್ಲಿಯೇ ಮಹಾನಗರ ಪಾಲಿಕೆವತಿಯಿಂದ ಔಟ್ ಪೊಲೀಸ್ ಸ್ಟೇಶನ್ ಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅದಕ್ಕೆ ಔಟ್ ಪೊಲೀಸ್ ಸ್ಟೇಶನ್ ಮಂಜೂರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಧಾರವಾಡದಅಣ್ಣಾ ಹಜಾರೆ ಚರಂತಿಮಠ ಗಾರ್ಡನ್ ವತಿಯಿಂದ ಸಭಾಪತಿ ಬಸವರಾಜ ಹೊರಟ್ಟಿಯವರಿಗೆಅವರ ತಾಯಿಯವರ ಭಾವಚಿತ್ರ ನೀಡಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಶಿವಯೋಗಿ ಪ್ಯಾಟಿಶೆಟ್ಟರ್, ಕಾರ್ಯದರ್ಶಿ ರಾಜು ಡಮ್ಮಳ್ಳಿ, ಉಪಾಧ್ಯಕ್ಷ ಚಿದಂಬರ ದಿಕ್ಷಿತ, ಖಜಾಂಚಿ ಸಿದ್ದು ಬೆಟಗೇರಿ, ಮಹಾಂತೇಶ ಕುಲಕರ್ಣಿ, ಮಂಗಲಕುಮಾರ ಗಾಳಿ, ಕೃಷ್ಣ ಕುಲಕರ್ಣಿ, ರಾಥೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.