ವಿಜಯನಗರ (ಹೊಸಪೇಟೆ) prajakiran. com : ಕೋರ್ಟ್ ಆವರಣದಲ್ಲಿ ಹಾಡಹಗಲೇ ವಕೀಲರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ವಿಜಯನಗರ (ಹೊಸಪೇಟೆ) ದಲ್ಲಿ ನಡೆದಿದೆ.
ಕಾಂಗ್ರೆಸ್ ಮುಖಂಡರು ಆಗಿರುವ ಡಾ. ತಾರಿಹಳ್ಳಿ ವೆಂಕಟೇಶ ಕೊಲೆಗೀಡಾದ ವಕೀಲರಾಗಿದ್ದಾರೆ.
ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಎನ್ನಲಾಗಿದೆ.
ವಕೀಲ ವೆಂಕಟೇಶ, ಕೋರ್ಟ್ ಆವರಣದಲ್ಲಿ ಕುಳಿತಿದ್ದ ಸಮಯದಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.
ಈ ಹತ್ಯೆಯನ್ನ ಮನೋಜ್ ಎಂಬಾತನೇ ಮಾಡಿದ್ದಾನೆ ಎಂಬ ಶಂಕೆಯ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಮನೋಜ್ ಬೆಳಿಗ್ಗೆಯಿಂದಲೇ ಕೋರ್ಟ್ ಆವರಣದಲ್ಲಿ ವಕೀಲರಿಗಾಗಿ ಎದುರು ನೋಡುತ್ತಿದ್ದ ಎನ್ನಲಾಗಿದೆ.
ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಆರೋಪಿ ಮನೋಜ್ ಕೊಲೆ ಮಾಡಿ ಪರಾರಿಯಾಗುವ ವೇಳೆಗೆ ಪೊಲೀಸರ ಕೈ ಗೆ ಸಿಕ್ಜಿ ಬಿದ್ದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹೊಸಪೇಟೆ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.