ಅಪರಾಧ

ಧಾರವಾಡದಲ್ಲಿ ಬಡ್ಡಿ ದಾಹಕ್ಕೆ ಬಿತ್ತು ಬಡವನ ಹೆಣ*….!?

*ಆನಂದ ಪಾಸ್ತೆಯ ಬಡ್ಡಿ ದಾಹಕ್ಕೆ ಬಿತ್ತು ಬಡವನ ಹೆಣ*….!?

*ಕರೆಪ್ಪ ಗುಳೆಣ್ಣವನರ್ ಹೆಸರಿಗೆ ಖರೀದಿ ಕರಾರು ಪತ್ರ*

*ಗುಂಡಾಗಳ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಬಡಪಾಯಿ ನಿಂಗರಾಜು*

*ಮೀಟರ್ ಬಡ್ಡಿಕುಳಗಳಿಗೆ ಕಡಿವಾಣ ಹಾಕಲು ಬಡವರ ಮಗ ಬಸವರಾಜ ಕೊರವರ ಒತ್ತಾಯ*

ಧಾರವಾಡ ಪ್ರಜಾಕಿರಣ.ಕಾಮ್ : ಆನಂದ ಪಾಸ್ತೆಯ ಹತ್ತು ಲಕ್ಷ ಬಡ್ಡಿದಾಹಕ್ಕೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿದ್ಯಾಗಿರಿ ಧಾರವಾಡದಲ್ಲಿ ನಡೆದಿದೆ‌.

ಹತ್ತು ಲಕ್ಷಕ್ಕೆ ಹಲವಾರು ವರ್ಷ ಬಡ್ಡಿ ಹಣ ತೆಗೆದುಕೊಂಡು ಕರೆಪ್ಪ ಗುಳೆಣ್ಣವರ ಹೆಸರಿನಲ್ಲಿ ಮನೆಯನ್ನು ಖರೀದಿ ನೋಂದಣಿ ಮಾಡಿಸಿಕೊಂಡು ಅಲ್ಲಿಂದ ಹೊರಹಾಕಲು ಅನಿಲ್ ಪಾಸ್ತೆ, ಸಾಗರ ಕುರ್ತಕೋಟಿ, ಈರಣ್ಣ ಕುರಿ, ಪೀರವ್ವ ಸೇರಿದಂತೆ ಹಲವು ಗೂಂಡಾಗಳು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದರಿಂದ ಮತ್ತಷ್ಟು ತೊಂದರೆ ಆಗುತ್ತಿದೆ ಎಂದು ನೊಂದ ನಿಂಗರಾಜು ವಿಷ ಸೇವಿಸಿ ವೀಷ ಸೇವಿಸುವ ಮುನ್ನ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದರಿಂದಾಗಿ ಮನನೊಂದು ಹಲವು ಬಾರಿ ಪೊಲೀಸ್ ಠಾಣೆ ಅಲೆದಾಡಿದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಎಂದು ವಿಷ ಸೇವಿಸಿ ಸಾಯುತ್ತಿರುವುದಾಗಿ ಹೇಳಿಕೊಂಡಿರುವ ವೀಡಿಯೋ ಇದೀಗ ವೈರಲ್ ಆಗಿದೆ.

ಈ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಈ ಬಗ್ಗೆ ಬಡವರ ಮಗ ಬಸವರಾಜ ಕೊರವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,
ಓರ್ವ ಬಡವನ ಬಗ್ಗೆ ಇಷ್ಟೊಂದು ಅನ್ಯಾಯವಾದಾಗಲೂ ಕಾನೂನು ಕ್ರಮ ಜರುಗಿಸದೇ ಇರುವುದು ಅನ್ಯಾಯ.

ನಿಂಗರಾಜನ ಕುಟುಂಬಕ್ಕೆ ನಾನು ಬೆನ್ನುಲುಬಾಗಿ ನಿಂತು ಆತನ ಆತ್ಮಕ್ಕೆ ಶಾಂತಿ ಸಿಗುವರೆಗೆ ಹೋರಾಟ ಮಾಡುತ್ತೇನೆ.

ಬಡ್ಡಿ ದಂಧೆಯಲ್ಲಿ ತೊಡಗಿ ಬಡ ಕುಟುಂಬಗಳನ್ನ ನಾಶ ಮಾಡುತ್ತಿರುವವರನ್ನ ಪೊಲೀಸರು ಜೈಲಿಗೆ ಅಟ್ಟಬೇಕೆಂದು ಬಡವರ ಮಗ ಬಸವರಾಜ ಕೊರವರ ಆಗ್ರಹಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *