ಹುಬ್ಬಳ್ಳಿ prajakiran.com : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದು, ಮಿಸ್ಟರ್ ಶಿವಕುಮಾರ್ ಯು ಆರ್ ಆನ್ ಬೇಲ್ ಎಂದು ತಿರುಗೇಟು ನೀಡಿದರು.
ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೀವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮಿಸ್ಟರ್ ಕಮಿಷನರ್ ಐ ವಿಲ್ ಸಿ ಯು ಅಂತೀರಾ.
ಹಾಗಿದ್ದರೆ ನಾನು ನಿಮ್ಮನ್ನು ಹೇಳ್ತೇನಿ. ಮಿಸ್ಟರ್ ಶಿವಕುಮಾರ್ ಯು ಆರ್ ಆನ್ ಬೇಲ್ ಮರೆಯಬೇಡಿ, ನಿಮ್ಮ ಗುಂಡಾಗಿರಿ ನಡೆಯಲ್ಲ ಎಂದು ಕಡಕ್ ಎಚ್ಚರಿಕೆ ನೀಡಿದರು.
ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ, ನಿಮ್ಮ ಮೇಲೆ ಕೋಟ್ಯಾಂತರ ರೂಪಾಯಿ ಭ್ರಷ್ಟಚಾರ ಆರೋಪವಿದೆ ಎಂಬುದು ಮರೆಯಬೇಡಿ. ನೀವೇನೂ ಮಾತನಾಡ್ತಿರಿ ಎಂಬುದು ನಿಮಗೆ ಗೊತ್ತರಲಿ ಎಂದು ಗುಡುಗಿದರು.