ಧಾರವಾಡ prajakiran.com : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ, ಶಿರಕೋಳ ನಂತರ ಧಾರವಾಡ ತಾಲೂಕಿನ ಲಕಮಾಪುರ ನಂತರ ಗರಗ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ.
ಮೊರಬ ಗ್ರಾಮದ ಜನತೆಯನ್ನು ಬೆಚ್ಚಿಬೀಳಿಸಿದ್ದ ಮಹಾಮಾರಿ ಕರೋನಾ ಇದೀಗ ಧಾರವಾಡ ತಾಲೂಕಿನ ಹಲವು ಹಳ್ಳಿಗಳಲ್ಲಿ ಕರೋನಾ ತನ್ನ ಆರ್ಭಟ ಶುರು ಮಾಡಿದೆ.
ಕರೋನಾ ವೈರಸ್ ಆರಂಭದಲ್ಲಿ ತಾಲೂಕಿನ ಲಕಮಾಪುರ ಅಜ್ಜಿಯೊಬ್ಬರಿಗೆ ಬಂದಿತ್ತು. ಅವರು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರ ಸಂಪರ್ಕದಿಂದ ಗ್ರಾಮದ ಬಸ್ ಚಾಲಕರ ಒಬ್ಬರ ಆರು ವರ್ಷದ ಮಗಳಿಗೆ ತಗುಲಿದೆ. ಈ ಮಗುವಿಗೆ ಅಜ್ಜಿಯ ಸಂಪರ್ಕದಿಂದಲೇ ಬಂದಿದೆ ಎನ್ನಲಾಗುತ್ತಿದೆ.
ಆತಂಕದ ಸಂಗತಿಯೆಂದರೆ ಮಗುವಿನಿಂದ ತಂದೆ ಬಸ್ ಚಾಲಕನಿಗೂ ಕರೋನಾ ಹರಡಿದೆಯಾ, ಆತ ಎಲ್ಲೆಲ್ಲಿ ಓಡಾಡಿದ್ದನೋ ಎಂದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಈಗಾಗಲೇ ಬಸ್ ಚಾಲಕನ ಗಂಟಲು ದ್ರವ ತಪಾಸಣೆ ಮಾಡಿ ಅವರನ್ನು ಈಗಾಗಲೇ ಹೋಂ ಕ್ವಾರಂಟಿನ್ ಮಾಡಲಾಗಿದೆ. ಇದೀಗ ಅವರ ವರದಿಗಾಗಿ ಗ್ರಾಮದ ಜನತೆ ಆತಂಕದಿಂದಲೇ ಎದುರು ನೋಡುತ್ತಿದ್ದಾರೆ.
ಈ ಕರೋನ ವೈರಸ್ ಮಹಾಮಾರಿ ಧಾರವಾಡ ತಾಲೂಕಿನ ಗರಗ ಗ್ರಾಮದ ಹೂವಿನ ವ್ಯಾಪಾರಿಗೆ ಹರಡಿರುವುದು ಧೃಢಪಟ್ಟಿದೆ.
ಇತನಿಂದ ಎಷ್ಟು ಜನರಿಗೆ ಹರಡಿದೆ, ಆತನೊಂದಿಗೆ ನೂರಾರು ಜನ ಸಂಪರ್ಕ ಹೊಂದಿದ್ದರು ಎಂಬ ಕಳವಳ ವ್ಯಕ್ತವಾಗಿದೆ.
ಗರಗ ಗ್ರಾಮದ ಬಸ್ ನಿಲ್ದಾಣದ ಸಮೀಪವೇ ಆತನ ಹೂವಿನ ಅಂಗಡಿಯಿತ್ತು. ಹೀಗಾಗಿ ಇತನ ಬಳಿ ಪ್ರತಿನಿತ್ಯ ನೂರಾರು ಜನ ಹೂವು ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಇದೇ ವೇಳೆ ಕರೋನಾ ವೈರಸ್ ಗರಗ ಗ್ರಾಮಕ್ಕೂ ಕಾಲಿಟ್ಟಿರುವುದು ಗರಗ ಗ್ರಾಮದ ಸುತ್ತಮುತ್ತಲಿನ ಕೋಟೂರು, ತಡಕೋಡ, ಕೊಟಬಾಗಿ ಹಾಗೂ ಇತರ ಗ್ರಾಮಗಳ ಜನತೆಗೆ ಕಂಗಲಾಗುವಂತೆ ಮಾಡಿದೆ.
ಈತನ ಹೂವಿನ ಅಂಗಡಿಯಿಂದ ಇದೀಗ ಕರೋನ ಸೊಂಕು ಹರಡಿದೆಯಾ ಇಲ್ಲವೇ ಎಂಬುದು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ವರದಿ ಬಂದನಂತರವಷ್ಟೇ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾಯಲೇಬೇಕು.