ಧಾರವಾಡ prajakiran.com : ಉತ್ತರಕರ್ನಾಟಕ ಭಾಗದ ಬೆಳಗಾವಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ್ ಆಯುಕ್ತರ ಕಚೇರಿಯ ಹಿರಿಯ ನಿರ್ದೇಶಕರಾಗಿರುವ ಬಿ.ಕೆಎಸ್ ವರ್ಧನ ಅವರು ತಮ್ಮ ಮೇಲಾಗುತ್ತಿರುವ ಶೋಷಣೆ, ದೌರ್ಜನ್ಯದ ವಿರುದ್ದ ಪರೋಕ್ಷ ಸಮರ ಸಾರಿದ್ದಾರೆ.
ಅದು ರಾಷ್ಟ್ರಪಿತ ಮಹಾತ್ಮ ಗಾಂಧಿಯ ಜನ್ಮದಿನದಂದು ತಮ್ಮ ಕಚೇರಿಯ ಶೌಚಾಲಯ ತೊಳೆದು, ಕಸ ಗೂಡಿಸಿ, ಒಂದು ದಿನದ ಸಾಂಕೇತಿಕ ಮೌನ ವೃತ ಆಚರಿಸುವ ಮೂಲಕ ವಿಭಿನ್ನ ದಾರಿಯಲ್ಲಿ ತಮ್ಮ ಹೋರಾಟದ ಹಾದಿಯನ್ನು ಹಿಡಿದಿದ್ದಾರೆ.
ಇದು ಒಂದು ದಿನದ ಸಾಂಕೇತಿಕ ಹೋರಾಟವಾದರೂ ಅದರ ಬಗ್ಗೆ ಈ ಹಿಂದೆಯೇ ಶಿಕ್ಷಣ ಸಚಿವ ಸುರೇಶಕುಮಾರ್ ಅವರ ಗಮನ ಸೆಳೆದಿದ್ದರು.
ಇದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ್ ಆಯುಕ್ತರ ಕಚೇರಿಯಲ್ಲಿ ಎಲ್ಲವೂ ಸರಿಯಲ್ಲ. ಸಂಘರ್ಷದ ದಾರಿ ಹಿಡಿದಿದೆ ಎಂಬುದರ ಸ್ಪಷ್ಟ ನಿರ್ದಶನವಾಗಿದೆ.
ಈ ಬಗ್ಗೆ ಈ ಹಿಂದೆ ಕೂಡ ಪ್ರತಿಭಟಿಸಿದ್ದ ಬಿ.ಕೆ.ಎಸ್ ವರ್ಧನ ಅವರು ಬಹಿರಂಗವಾಗಿ ಯಾವುದನ್ನು ಸ್ಪಷ್ಟವಾಗಿ ಹೊರಹಾಕಿಲ್ಲ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ತಾವು ಅನುಭವಿಸಿದ ನೋವು, ಸಂಕಷ್ಟ, ಸವಾಲು ಹಾಗೂ ಹಿರಿಯ ಅಧಿಕಾರಿ ನಡೆಸಿಕೊಂಡ ರೀತಿಯ ವಿರುದ್ದ ಬೇಸರ, ಮುಜುಗರ ಹೊರಹಾಕಿದ್ದಾರೆ.
ಪರೋಕ್ಷ ಸಮರ ಸಾರಿರುವುದು ಮಾತ್ರ ಬಹಿರಂಗ ಸತ್ಯವಾಗಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.