ಹುಬ್ಬಳ್ಳಿ-ಧಾರವಾಡ prajakiran.com : ಕಳೆದ ಹಲವು ತಿಂಗಳಿಂದ ಕರೋನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಿ ಆರ್ ಟಿ ಎಸ್ ನ ಚಿಗರಿ ಬಸ್ ಸಂಚಾರ ಪುನರ್ ಆರಂಭಗೊಳ್ಳಲು ಕೊನೆಗೂ ಮುಹೂರ್ತ ನಿಗದಿಯಾಗಿದೆ.
ರಾಜ್ಯ ಸರಕಾರದ ಆದೇಶದಂತೆ ಹವಾನಿಯಂತ್ರಿತ ಚಿಗರಿ ವಾಹನಗಳು ಕೋವಿಡ್ 19 ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ರಸ್ತೆಗೆ ಇಳಿಯಲಿವೆ.
ಪ್ರಾರಂಭದಲ್ಲಿ ಜೂನ್ 5ರಿಂದ ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ ಅವಳಿ ನಗರದ ಮಧ್ಯೆ ಈ ಹಿಂದಿನಂತೆ ಬಸ್ ಸಂಚಾರ್ ಆರಂಭವಾಗಲಿವೆ.
ಹುಬ್ಬಳ್ಳಿಯ ಕೇಂದ್ರಿಯ ಬಸ್ ನಿಲ್ದಾಣದಿಂದ ಧಾರವಾಡದ ಬಿ ಆರ್ ಟಿ ಎಸ್ ಬಸ್ ನಿಲ್ದಾಣಗಳ ನಡುವೆ ಜನ ದಟ್ಟಣೆ ಅನುಗುಣವಾಗಿ ಬಸ್ ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಸಂಚಾರಕ್ಕೆ ಅನುಗುಣವಾಗಿ ಬಸ್ ಕಾರ್ಯಾಚರಣೆ ಹೆಚ್ಚಿಸಲಾಗುವುದು.
ಪ್ರಯಾಣಿಕರು ಎಂದಿನಂತೆ ಸಹಕರಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.