ಮುಂಬಯಿ prajakiran.com : ಸ್ವಾತಂತ್ರ್ಯವೀರ ಸಾರ್ವಕರ್ ಅವರ 137 ನೇ ಜನ್ಮದಿನದ ಅಂಗವಾಗಿ ಮುಂಬಯಿಯ ಪ್ರತಿಷ್ಠಿತ ರಾಮಭಾವು ಮ್ಹಾಳಗಿ ಪ್ರಭೋದಿನಿ (ಆರ್ ಎಂಪಿ ) ಹಾಗೂ ಸಾರ್ವಕರ್ ದರ್ಶನ ಪ್ರತಿಷ್ಠಾನ ವತಿಯಿಂದ ಮೇ 28ರಂದು ಸಂಜೆ 5ಗಂಟೆಗೆ ಫೇಸ್ ಬುಕ್ ಲೈವ್ https://www.facebook.com/rmponweb.org. ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಇತಿಹಾಸ ತಜ್ಞ ಹಾಗೂ ಸಾರ್ವಕರ್ ಇಕೋ ಫ್ರಮ್ ಫಾರಗಟನ್ ಫಾಸ್ಟ್ ಲೇಖಕ ಡಾ . ವಿಕ್ರಮ ಸಂಪತ್ ಅವರು ಸಭಿಕರನ್ನುದ್ದೇಶಿಸಿ, ಟೈಮ್ ಲೆಸ್ ಸಾರ್ವಕರ್ ಹಾಗೂ ಎ […]
Author: PK Team
ಧಾರವಾಡದ ಮೆಣಸಿನಕಾಯಿ ವ್ಯಾಪಾರಿ ಗುಣಮುಖ : ಆಸ್ಪತ್ರೆಯಿಂದ ಬಿಡುಗಡೆ
ಧಾರವಾಡ prajakiran.com : ವಿದ್ಯಾನಗರಿ ಧಾರವಾಡದ ಮೆಣಸಿನಕಾಯಿ ವ್ಯಾಪಾರಿ ಕೋವಿಡ್ ನಿಂದ ಗುಣಮುಖರಾಗಿ ಬುಧವಾರ ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದಾಗಿ , ಮೇ ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಧಾರವಾಡ ಹೊಸಯಲ್ಲಾಪುರದ ಕೋಳಿಕೆರೆ, ನವಲೂರ ಅಗಸಿ ಪ್ರದೇಶದ ಪಿ- 705 ( 35 ವರ್ಷ,ಪುರುಷ) ಸಂಪೂರ್ಣ ಗುಣಮುಖರಾಗಿದ್ದಾರೆ. ಇವರಿಗೆ 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಅವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ […]
ತಿರುಪತಿ ತಿಮ್ಮಪ್ಪನ ಆಸ್ತಿಗೆ ಕೈ ಹಾಕಿದರೆ ನಿಮ್ಮ ತಂದೆಗೆ ಬಂದ ಪರಿಸ್ಥಿತಿ : ಪ್ರಮೋದ ಮುತಾಲಿಕ್ ಎಚ್ಚರಿಕೆ
ಧಾರವಾಡ prajakiran.com : ದೇಶದ ಕೋಟ್ಯಾಂತರ ಭಕ್ತರ ಆರಾದ್ಯದೈವವಾಗಿರುವ ತಿರುಪತಿ ತಿಮ್ಮಪ್ಪನ ಆಸ್ತಿಗೆ ಕೈಹಾಕಿದರೆ ನಿಮ್ಮ ತಂದೆಗೆ ಆದ ಪರಿಸ್ಥಿತಿ ನಿಮಗೂ ಬರಬಹುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಅವರು ಬುಧವಾರ ಧಾರವಾಡ ಜಿಲ್ಲಾಧಿಕಾರಿ ಮುಖಾಂತರ ಆಂಧ್ರಪ್ರದೇಶದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಿರುಪತಿ ತಿಮ್ಮಪ್ಪನ ದೇವಸ್ಥಾನದ ಆಸ್ತಿ ಮಾರಾಟಕ್ಕೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ ತಾತ್ಕಾಲಿಕವಾಗಿ ಅದಕ್ಕೆ ತಾನೇ ತಡೆಯಾಜ್ಞೆ […]
ನಬಾರ್ಡ್ ಅಧ್ಯಕ್ಷರಾಗಿ ಜಿ.ಆರ್.ಚಿಂತಲ ಅಧಿಕಾರ ಸ್ವೀಕಾರ
ಬೆಂಗಳೂರು prajakiran.com ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ಅಧ್ಯಕ್ಷರಾಗಿ ಜಿ.ಆರ್.ಚಿಂತಲ ಅವರು ಬೆಂಗಳೂರಿನಲ್ಲಿರುವ ನಬಾರ್ಡ್ನ ಕೇಂದ್ರ ಕಚೇರಿಯಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದರು. ಇದುವರೆಗೆ ಚಿಂತಲ ಅವರು ನಬಾರ್ಡ್ನ ಅಂಗಸಂಸ್ಥೆಯಾಗಿರುವ ಎನ್ಎಬಿಎಫ್ಐಎನ್ಎಸ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಚಿಂತಲ ಅವರು ನವದೆಹಲಿಯಲ್ಲಿರುವ ದೇಶದ ಪ್ರತಿಷ್ಠಿತ ಇಂಡಿಯನ್ ಅಗ್ರಿಕಲ್ಚರ್ ರೀಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಬಾರ್ಡ್ ಕೇಂದ್ರ ಕಚೇರಿಯಲ್ಲಿ ಹಲವಾರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಇದಲ್ಲದೇ, ಅವರು ಮುಂಬೈ, ಅಂಡಮಾನ್ & ನಿಕೋಬಾರ್, ಹೈದ್ರಾಬಾದ್, ಚಂಡೀಘಡ, ಲಕ್ನೋ, ನವದೆಹಲಿ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿರುವ ಪ್ರಾದೇಶಿಕ ಕಚೇರಿಗಳಲ್ಲಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಹೈದ್ರಾಬಾದ್ನ ಅಗ್ರಿ-ಸಿನೆಸ್ ಫೈನಾನ್ಸ್ ಲಿಮಿಟೆಡ್ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರು, ಲಕ್ನೋದಲ್ಲಿರುವ ಗ್ರಾಮೀಣಾಭಿವೃದ್ಧಿ ಬ್ಯಾಂಕರ್ಸ್ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ಮಾಡುವ ಬಗ್ಗೆ ರೂಪುರೇಷೆಯನ್ನು 2006 ರಲ್ಲಿ ಸಿದ್ಧಪಡಿಸಿದ್ದರು. Share on: WhatsApp
ನಾಲ್ವರು ಸಿವಿಲ್ ಪೊಲೀಸರಿಗೆ ಪಾಸಿಟಿವ್ : ಭೇಟಿ ನೀಡಿದ್ದ ಹೋಟೆಲ್ ಸೀಲ್ ಡೌನ್
ಹಾಸನ: ಹಾಸನ ಜಿಲ್ಲೆಯ ನಾಲ್ವರು ಸಿವಿಲ್ ಪೊಲೀಸರಿಗೆ ಕರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಅರಸೀಕೆರೆ ಪಟ್ಟಣದ ಒಂದು ಹೋಟೆಲ್ ಸೀಲ್ ಡೌನ್ ಮಾಡಿದೆ. ಪಟ್ಟಣದ ಅಯೋಧ್ಯೆ ಹೋಟೆಲ್ ಅನ್ನು ಅರಸಿಕೆರೆ ತಾಲ್ಲೂಕು ಆಡಳಿತ ಸೀಲ್ ಮಾಡಿದೆ. ಅವರೆಲ್ಲರೂ ನಿಪ್ಪಾಣಿಯಿಂದ ಡ್ಯೂಟಿ ಮುಗಿಸಿ ಹಾಸನಕ್ಕೆ ಬರೋ ಮಾರ್ಗ ಮಧ್ಯೆ ಹೋಟೆಲ್ ಗೆ ಭೇಟಿ ನೀಡಿದ್ದರು. ಈ ಹೋಟೆಲ್ ನಲ್ಲಿ ಪೊಲೀಸರು ಊಟ ಪಾರ್ಸೆಲ್ ಪಡೆದಿದ್ದರು. ಇದೀಗ ಪೊಲೀಸರಿಗೇ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೋಟೆಲ್ ಬಂದ್ ಮಾಡಲಾಗಿದೆ. ಆರೋಗ್ಯ ಇಲಾಖೆ ಹೋಟೆಲ್ […]
ಕೊಗನೋಳಿ ಚೆಕ್ ಪೋಸ್ಟ್ ನಲ್ಲಿದ್ದ ಹಾಸನ ಜಿಲ್ಲೆಯ 4 ಪೊಲೀಸರಲ್ಲಿ ಕರೋನಾ ಸೋಂಕು ಪತ್ತೆ
ಬೆಳಗಾವಿ prajakiran.com : ಕೊಗನೋಳಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಹಾಸನ ಜಿಲ್ಲೆಯ 4 ಪೊಲೀಸರಲ್ಲಿ ಕರೋನಾ ಸೋಂಕು ಪತ್ತೆಯಾಗಿರುವುದು ನಿಪ್ಪಾಣಿಯಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕ ಪ್ರವೇಶಿಸುತ್ತಿರುವ ಜನರನ್ನು ನಿಯಂತ್ರಣ ಮಾಡಲು ಹಾಗೂ ಅವರವರ ಜಿಲ್ಲೆಗಳಿಗೆ ತೆರಳಿ ಕ್ವಾರೆಂಟನ್ನಲ್ಲಿಡಲು ದೃಷ್ಟಿಯಿಂದ ಬೆಳಗಾವಿ ಆಡಳಿತ ಸರ್ಕಾರಕ್ಕೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು, […]
ಬುಧವಾರ ಒಂದೇ ದಿನ 122 ಕೇಸ್ ಪತ್ತೆ : ಕಲಬರುಗಿ 28, ಯಾದಗಿರಿ 16, ಹಾಸನ 14, ಬೀದರನಲ್ಲಿ 13 ಪ್ರಕರಣ
ಬೆಂಗಳೂರು prajakiran.com : ರಾಜ್ಯದಲ್ಲಿ ಬುಧವಾರವೂ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನ 122 ಕೇಸ್ ಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ. ಆ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ2405ಕ್ಕೆ ಏರಿದೆ. ಈ ಪೈಕಿ 25 ಮಕ್ಕಳಿಗೆ ಕರೋನಾ ಅಟ್ಯಾಕ್ ಮಾಡಿದೆ. ಅದರಲ್ಲೂ 15 ವರ್ಷದೊಳಗಿನ 25 ಮಕ್ಕಳಿಗೆ ಕರೋನಾ ಕಾಣಿಸಿಕೊಂಡಿರುವುದು ಪೋಷಕರಿಗೆ ಆತಂಕ ತಂದಿದೆ. ಇದರಲ್ಲಿ ಯಾದಗಿರಿಯ ಒಂದು ವರ್ಷದ ಮಗು, ಬೆಳಗಾವಿಯಲ್ಲಿ ಎರಡು ವರ್ಷದ ಹೆಣ್ಣು ಮಗು ಹಾಗೂ […]
ಧಾರವಾಡ ಜಿಲ್ಲೆಯ ಮಾವು ಬೆಳೆಗಾರ ರೈತರ ನೆರವಿಗೆ ಧಾವಿಸಬೇಕಾದ ಎಪಿಎಂಸಿ ಜಾಣಕುರುಡು
ಧಾರವಾಡ prajakiran.com : ಲಾಕ್ ಡೌನ್ ನಿಂದ ತತ್ತರಿಸಿ ಹೋಗಿರುವ ಧಾರವಾಡ ಜಿಲ್ಲೆಯ ಮಾವು ಬೆಳೆಗಾರ ರೈತರ ನೆರವಿಗೆ ಧಾವಿಸಬೇಕಾದ ಧಾರವಾಡ ಎಪಿಎಂಸಿ ಕಾರ್ಯದರ್ಶಿ ಹಾಗೂ ಧಾರವಾಡ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರು ಜಾಣಕುರುಡುತನ ತೋರಿಸುತ್ತಿದ್ದಾರೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೋರವರ ಆಪಾದಿಸಿದ್ದಾರೆ. ಮಾವಿನ ಹಣ್ಣಿನ ದಲಾಲಿಗಳ ಹಗಲು ದರೋಡೆ ಕುರಿತು ಮೇ 20ರಂದು ಲಿಖಿತ ದೂರು ನೀಡಿದರೂ ಕೂಡ ಅವರ ವಿರುದ್ದ ಶಿಸ್ತುಕ್ರಮಕ್ಕೆ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿರುವುದು ಬೇಸರದ ಸಂಗತಿ. ಪ್ರತಿಯೊಬ್ಬ ರೈತರ […]
ಕೇವಲ 5 ಸಾವಿರಕ್ಕೆ 5 ದಿನಗಳ ಮಗುವನ್ನೇ ಮಾರಿದ ಪಾಪಿ ತಾಯಿ ….! : ಹೊನ್ನಾಳಿ ಸರಕಾರಿ ಆಸ್ಪತ್ರೆ ಸಿಬ್ಬಂದಿ ಶಾಮೀಲು
ದಾವಣಗೆರೆ prajakiran.com : ಐದು ದಿನಗಳ ಹಿಂದೆಯಷ್ಟೇ ಹೆತ್ತ ಹಸುಗೂಸನ್ನು ಕೇವಲ 5 ಸಾವಿರಕ್ಕೆ ತಾಯಿಯೇ ಮಾರಾಟ ಮಾಡಿದ ಹೃದಯ ವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಹೋನ್ನಾಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಹೆತ್ತ ಮಗುವನ್ನೇ ಮಾರಿದ ಪಾಪಿ ತಾಯಿ ವಿರುದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರು ದಾಖಲಿಸಿದ್ದು, ಆಕೆಗೆ ಸಹಕರಿಸಿದ ಆರೋಪದ ಮೇಲೆ ಆಸ್ಪತ್ರೆ ಸಿಬ್ಬಂದಿ ಸೇರಿ ಆರು ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಮಗು ಖರೀದಿಸಿದ ಆರೋಪದ ಮೇಲೆ ಲಾವಣ್ಯ,ಅಣ್ಣೇಶ, ಮಧ್ಯಸ್ಥಿಕೆ ವಹಿಸಿದ ಶುಶ್ರೂಷಕ […]
ಬ್ರಹ್ಮಾಂಡ ಗುರೂಜಿ ವಿರುದ್ದ ಪ್ರಕರಣ ದಾಖಲು
ಕೊಡಗು prajakiran.com : ಕೊಡಗಿನಲ್ಲಿ ಬರುವ ದಿನಗಳಲ್ಲಿ ಭಾರಿ ಭೂಕಂಪವಾಗುತ್ತದೆ. ಇದರಿಂದಾಗಿ ಇಡೀ ಊರು ನೆಲಸಮವಾಗುತ್ತದೆ ಎಂದು ಭಾರೀ ಭವಿಷ್ಯ ನುಡಿದಿದ್ದ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರ ವಿರುದ್ದ ಕೊನೆಗೂ ಪ್ರಕರಣ ದಾಖಲಾಗಿದೆ. ಈ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಕೊಡಗು ಬೆಳೆಗಾರರ ಒಕ್ಕೂಟ ಅವರ ವಿರುದ್ದ ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರು ಸೋಮವಾರವಷ್ಟೇ […]