ದಾವಣಗೆರೆ prajakiran.com : ಐದು ದಿನಗಳ ಹಿಂದೆಯಷ್ಟೇ ಹೆತ್ತ ಹಸುಗೂಸನ್ನು ಕೇವಲ 5 ಸಾವಿರಕ್ಕೆ ತಾಯಿಯೇ ಮಾರಾಟ ಮಾಡಿದ ಹೃದಯ ವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಹೋನ್ನಾಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹೆತ್ತ ಮಗುವನ್ನೇ ಮಾರಿದ ಪಾಪಿ ತಾಯಿ ವಿರುದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರು ದಾಖಲಿಸಿದ್ದು, ಆಕೆಗೆ ಸಹಕರಿಸಿದ ಆರೋಪದ ಮೇಲೆ ಆಸ್ಪತ್ರೆ ಸಿಬ್ಬಂದಿ ಸೇರಿ ಆರು ಜನರ ವಿರುದ್ದ ಪ್ರಕರಣ ದಾಖಲಾಗಿದೆ.
ಮಗು ಖರೀದಿಸಿದ ಆರೋಪದ ಮೇಲೆ ಲಾವಣ್ಯ,ಅಣ್ಣೇಶ, ಮಧ್ಯಸ್ಥಿಕೆ ವಹಿಸಿದ ಶುಶ್ರೂಷಕ ಕುಮಾರ್, ಲ್ಯಾಬ್ ಟೆಕ್ನಿಷಿಯನ್ ಬಸವರಾಜ್, ಡಿ ಗ್ರೂಪ್ ನೌಕರ ಮಹೇಶಅವರನ್ನು ಬಂಧಿಸಲಾಗಿದೆ.
ಹೊನ್ನಾಳ್ಳಿ ಸಮೀಪದ ಗ್ರಾಮವೊಂದರ ಮಹಿಳೆ 5 ದಿನಗಳ ಹಿಂದೆ ಹೊನ್ನಾಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಗಂಡ ಸತ್ತ ನಂತರ ಮಗು ಜನಿಸಿದೆ.
ಹೀಗಾಗಿ ನನಗೆ ಮಗು ಬೇಡ. ಯಾರಿಗಾದರೂ ಕೊಡುತ್ತೇನೆ ಇಲ್ಲವೇ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗುತ್ತೇನೆ ಎಂದಾಗ ದತ್ತು ಕೇಂದ್ರಕ್ಕೆ ಕೊಡಿ ಎಂದು ಕೆಲವರು ನೀಡಿದ್ದರು.
ಮೇ 22ರಂದು ಆಸ್ಪತ್ರೆಗೆ ಹೋಗಿ ಮಗು ಬೇಡವೆಂದರೆ ಜಿಲ್ಲಾ ರಕ್ಷಣಾ ಘಟಕಕ್ಕೆ ನೀಡಿ ಎಂದು ಹೇಳಿದಾಗ ತಾಯಿ ಮಗುವನ್ನು ಕೊಡಲು ನಿರಾಕರಿಸಿದ್ದರು.
ಆದರೆ, ಮೇ 24ರಂದು ತಾಯಿ ಇದ್ದ ಗ್ರಾಮಕ್ಕೆ ತೆರಳಿದಾಗ ಅಲ್ಲಿ ಮಗು ಇರಲಿಲ್ಲ. ಈಬಗ್ಗೆ ವಿಚಾರಿಸಿದಾಗ ತಾಯಿ ಸತ್ಯ ಬಾಯಿ ಬಿಟಿದ್ದಾಳೆ.
ಆಸ್ಪತ್ರೆಯಿಂದ ಬಿಡುಗಡೆಯಾದ ದಿನವೇ ನೌಕರ ಮಹೇಶ್ ಮಗುವನ್ನು ಬೇರೊಬ್ಬರಿಗೆ ಕೊಡಿಸಿ 5 ಸಾವಿರ ನೀಡಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆ ಸಿಡಿಪಿಒ ಮಹಾಂತಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.
ಒಟ್ಟಾರೆ ಹೆತ್ತ ಮಗುವನ್ನೇ ಮಾರಿದ ಪಾಪಿ ತಾಯಿ ಕೊನೆಗೂ ಪಶ್ಚಾತಾಪ ಪಡುತ್ತಿರುವುದು ಸುಳ್ಳಲ್ಲ.