ಕೊಪ್ಪಳ prajakiran.com : ರೈತರೊಬ್ಬರಿಗೆ ತಮ್ಮ ಜಮೀನಿನ ಖಾತಾ ಹಾಗೂ ಉತಾರ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಶಿರಸ್ತೆದಾರ ಹಾಗೂ ತಹಸೀಲ್ದಾರ್ ರನ್ನು ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಕೆಡುವವುಲ್ಲಿ ಯಶಸ್ವಿಯಾದ ಘಟನೆ ಗಂಗಾವತಿಯಲ್ಲಿ ನಡೆದಿದೆ.
ರೈತನ ಬಳಿ 6000 ರೂ ಬೇಡಿಕೆಯಿಟ್ಟಿದ್ದ ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ್ ಹಾಗೂ ಶಿರಸ್ತೇದರ್ ಶರಣಪ್ಪ ಸೋಮವಾರ ಎಸಿಬಿ ಬಲೆಗೆ ಬಿದಿದ್ದಾರೆ.
ಗಂಗಾವತಿಯ ವಡ್ಡರಹಟ್ಟಿಯ ಸುಂದರ್ ರಾಜ್ ಅವರು ತಮ್ಮ ಜಮೀನಿನ ಖಾತಾ ಹಾಗೂ ಉತಾರ್ ಮಾಡಲು 6000 ರೂಪಾಯಿ ರೈತನಿಗೆ ಬೇಡಿಕೆಯನ್ನ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಇದರಿಂದ ನೋಂದ ರೈತ ಎಸಿಬಿ ಮೊರೆ ಹೋಗಿದ್ದ. ಪ್ರಕರಣ ದಾಖಲಿಸಿಕೊಂಡ ಭ್ರಷ್ಟಾಚಾರ ನಿಗ್ರಹ ದಳದ ತಂಡ ಖಚಿತ ಮಾಹಿತಿ ಮೇರೆಗೆ ಸೋಮವಾರ ರೈತನಿಂದ ಹಣ ಪಡೆಯುವ ಸಮಯದಲ್ಲಿ ದಾಳಿ ನಡೆಸಿ ಬಲೆಗೆ ಕೆಡವಿದ್ದಾರೆ.
ತಹಶೀಲ್ದಾರ್ ಚಂದ್ರಕಾಂತ್ ಹಾಗೂ ಶಿರಾಸ್ತೇದರ್ ಶರಣಪ್ಪ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವ ಎಸಿಬಿ ಡಿಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದೆ.