ರಾಜ್ಯ

ಧಾರವಾಡದ ವಕೀಲ ಬಿ.ಐ. ದೊಡ್ಡಮನಿ ಹೃದಯಾಘಾತದಿಂದ ಸಾವು …!

 * ಕರೋನಾ ಟೆಸ್ಟ್ ವರದಿ ಬಾಕಿ

ಧಾರವಾಡ prajakiran.com : ದಲಿತ ಸಂಷರ್ಷ ಸಮಿತಿ  ಜೊತೆಗೆ ಗುರುತಿಸಿಕೊಂಡಿದ್ದ ಧಾರವಾಡದ ವಕೀಲ ಬಿ.ಐ. ದೊಡ್ಡಮನಿ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಅವರಿಗೆ ಸೋಮವಾರ ಬೆಳಗ್ಗೆ ಪ್ರಭುನಗರ ಹೊನ್ನಾಪುರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಅಲ್ಲಿ ಕೋವಿಡ್ ತಪಾಸಣೆ ಜೊತೆಗೆ ಅವರನ್ನು ಹಲವು ತಪಾಸಣೆಗೆ ಒಳಪಡಿಸಿದ್ದರು. ಇದರಿಂದ ಇನ್ನಷ್ಟು ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಲಕ್ಷ್ಮಣ ದೊಡ್ಡಮನಿ ಅವರು ಪ್ರಜಾಕಿರಣ.ಕಾಮ್ ಗೆ ತಮ್ಮ ಅಳಲು ತೋಡಿಕೊಂಡರು.

ಕೋವಿಡ್ ತಪಾಸಣೆ ಮಾಡಲಾಗಿದ್ದು, ವರದಿ ಬರುವುದು ಇನ್ನೂ ಬಾಕಿಯಿದೆ. ನಾವು ನಮ್ಮ ಒಳ್ಳೆಯ ಗೆಳೆಯನನ್ನು ಕಳೆದುಕೊಂಡುಅನಾಥರಾಗಿದ್ದೇವೆ ಎಂದು ಕಂಬನಿ ಮಿಡಿದಿದ್ದಾರೆ.

ಅವರ ಮೇಲೆ ಈ ಹಿಂದೆ ಕಚೇರಿಯಲ್ಲಿದ್ದಾಗಲೇ ಹಾಡಹಗಲೇ ಮರಣಾಂತಿಕ ಹಲ್ಲೆ ನಡೆದಾಗ ಹಲವು ದಿನಗಳ ಕಾಲ ಹೋರಾಟ ನಡೆಸಿ ಸಾವು ಗೆದಿದ್ದ ಬಿ.ಐ. ದೊಡ್ಡಮನಿ ಇದೀಗ ಹೃದಯಾಘಾತ ಹಾಗೂ ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಸಾವನ್ನಪ್ಪಿರುವುದು ವಿಧಿಯಾಟ ಎಂದು ಕಣ್ಣೀರು ಹಾಕಿದರು.

ಧಾರವಾಡದ ವಕೀಲ ಬಿ.ಐ. ದೊಡ್ಡಮನಿ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *