ಹುಬ್ಬಳ್ಳಿ : ಹುಬ್ಬಳ್ಳಿಯ ಆಲ್ ತಾಜ್ ಹೋಟೆಲ್ ಬಳಿ ಹಾಡ ಹಗಲೇ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಮುಂಬೈ ಮೂಲದ ಇಬ್ಬರು ಶಾರ್ಪ್ ಶೂಟರ್ ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮುಂಬೈ ಪೊಲೀಸರು ಈ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಆಗಸ್ಟ್ ೭ ರಂದು ಹುಬ್ಬಳ್ಳಿಯಲ್ಲಿ ಫ್ರೂಟ್ ಇರ್ಫಾನ್ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಶಾರ್ಪ್ ಶೂಟರ್ ರಾಜೇಂದ್ರ ರಾವತ್, ರಾಜು ನೇಪಾಳಿ ಬಂಧಿತ ಶೂಟರ್ ಗಳು ಎಂದು ತಿಳಿದುಬಂದಿದೆ.
ರಾಜೇಂದ್ರ ಮತ್ತು ರಾಜು ಬಚ್ಚಾಖಾನ್ ಗ್ಯಾಂಗ್ ನವರು ಎಂಬ ಮಾಹಿತಿ ಗೊತ್ತಾಗಿದೆ.
ಈಗಾಗಲೇ ಶೂಟೌಟ್ ಪ್ರಕರಣದಲ್ಲಿ ಧಾರವಾಡದ ಐವರು ಹಾಗೂ ಮೈಸೂರು ಮೂಲದ ಇಬ್ಬರನ್ನುಸೇರಿ ಒಟ್ಟು ೭ ಜನರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು. ಈಗ ಬಂಧನಕ್ಕೆ ಒಳಗಾದ
ಹತ್ಯೆಗೆ ಬಳಸಿದ ಮೂರು ಪಿಸ್ತೂಲ್ ಸಹ ಮುಂಬೈನಿಂದಲೇ ಪೂರೈಕೆ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಬಂಧಿತ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಗೆ ಕರೆ ತರಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಪ್ರಜಾಕಿರಣ.ಕಾಮ್ ಗೆ ತಿಳಿಸಿವೆ.