ಧಾರವಾಡ prajakiran.com : ಧಾರವಾಡದ ಹಿರಿಯ ಅಥ್ಲೇಟಿಕ್ ಕೋಚ್ ಶಿವಕುಮಾರ ಎಸ್.ಅಗಡಿ (೭೮) ಅವರು ವಿವೇಕಾನಂದ ನಗರದಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಮೂಲತಃ ಶಿಗ್ಗಾಂವ ತಾಲೂಕಿನ ಬನ್ನೂರ ಗ್ರಾಮದವರಾದ ಅಗಡಿ, ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಆನಂತರ ಅವರು ಧಾರವಾಡದಲ್ಲಿ ಸಿಂಥೆಟಿಕ್ ಟ್ರಾಕ್ ನಿರ್ಮಾಣಕ್ಕೆ ಹಲವು ಸತತ ಪರಿಶ್ರಮ ಹಾಗೂ ಜಿಲ್ಲೆಯ ಮಕ್ಕಳಿಗೆ ಓಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹ,ಅಗತ್ಯ ತರಬೇತಿ, ಮಾರ್ಗದರ್ಶನ ನೀಡಿದ್ದರು.
ಜೊತೆಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ಕೇಂದ್ರ ನಿರ್ವಹಣೆ ಹಾಗೂ ಬಡಮಕ್ಕಳಿಗೆ ತಮ್ಮ ಪಿಂಚಣಿಯ ಬಹುಪಾಲು ಹಣವನ್ನು ವಿನಿಯೋಗಿಸಿದ್ದರು.
ಸಂತಾಪ: ಪ್ರತಿಯೊಬ್ಬ ಕ್ರೀಡಾ ಪಟುವಿಗೆ ಒಬ್ಬ ಮಾದರಿಯ ವ್ಯಕ್ತಿಯಾಗಿದ್ದ ಅಗಡಿ, ಅನೇಕ ಕ್ರೀಡಾಪಟುಗಳನ್ನು ನೆರವು ನೀಡಿ ಬೆಳೆಸಿದ್ದಾರೆ.
ಅವರ ಅಗಲಿಕೆಯಿಂದ ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಶೋಕವ್ಯಕ್ತಪಡಿಸಿದ್ದಾರೆ.