ಹುಬ್ಬಳ್ಳಿ prajakiran.com : ಹೆಬಸೂರ ಹತ್ತಿರ ಬೆಣ್ಣೆ ಹಳ್ಳಕ್ಕೆ ಕೊಚ್ಚಿಹೋದ ರೈತರ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನವಲಗುಂದ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಹತ್ತಿರ ಇರುವ ಹೆಬಸೂರ-ಬೆನ್ನೂರ ದಾರಿ ಮೂಲಕ ಬಲ್ಲರವಾಡ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗುವಾಗ ಬೆಣ್ಣೆಹಳ್ಳಕ್ಕೆ ಕೊಚ್ಚಿಹೋದ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ರೈತ ದೇವೆಂದ್ರಪ್ಪ ಮಾದರ ಹಾಗೂ ಶ್ರೀಕಾಂತ ಇನಾಮತಿ ಅವರ ಕುಟುಂಬದ ನೆರವಿಗೆ ತಕ್ಷಣ ಧಾವಿಸಬೇಕು ಎಂದು ಹೇಳಿದರು.
ಆ. ೨೩ರಂದು ಬೆಣ್ಣೆಹಳ್ಳದ ನೀರಿನಲ್ಲಿ ದಾಟಿ ಜಮೀನುಗಳಿಗೆ ಹೋಗುವಾಗ ನೀರು ಹೆಚ್ಚಿದ್ದರಿಂದ ಹಳ್ಳದಾಟುವಾಗ ನೀರಿನ ಭಾರಿ ಸೆಳೆತಕ್ಕೆ ಸುಲುಕಿ ಕೊಚ್ಚಿ ಹೋಗಿದ್ದರು.
ಈ ಸಂದರ್ಭದಲ್ಲಿ ಶಿವಣ್ಣಾ ಶಾನವಾಡ, ಪ್ರಲ್ಹಾದ ಇನಾಮತಿ, ಸಂಜೀವ ರಾಯರಡ್ಡಿ, ದ್ಯಾಮನಗೌಡ ಪಾಟೀಲ, ರಾಮಣ್ಣಾ ಇನಾಮತಿ, ನಾಗಪ್ಪ ಶರೆವಾಡ, ಮುತ್ತಪ್ಪ ಗಡ್ಡೆಣ್ಣವರ, ವೆಂಕಣ್ಣಾ ಇನಾಮತಿ, ನೀಲಪ್ಪ ಮಾದರ, ಸೋಮಪ್ಪ ಮಾದರ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.