ಧಾರವಾಡ prajakiran.com : ಕರೋನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಸಾವಿರಾರು ಶ್ಯಾಮಿಯಾನ ಹಾಗೂ ಲೈಟಿಂಗ್, ಸೌಂಡ್ ಸಿಸ್ಟಿಮ್ ದ ಮಾಲೀಕರ ಹಾಗೂ ನೌಕರರ ಪರಿಸ್ಥಿತಿ ಗಂಭೀರ ವಾಗಿದೆ.
ಗಣೇಶ ಚತುರ್ಥಿ ಸಂದರ್ಭದಲ್ಲಿ ಅವರ ಧ್ವನಿ ವರ್ಧಕ ಹಾಗೂ ಶ್ಯಾಮಿಯಾನಅನುಮತಿ ನೀಡದಿದ್ದರೆ ಹೇಗೆ ಎಂದು ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಶ್ಯಾಮಿಯಾನ ಹಾಗೂ ಲೈಟಿಂಗ್, ಸೌಂಡ್ ಸಿಸ್ಟಿಮ್ ದವರುಗಳಿಗೆ ಉದ್ಯೋಗ ಆರಂಭಿಸಲು ತಕ್ಷಣ ಅನುಮತಿ ನೀಡಬೇಕು.
ಅದರಲ್ಲಿ ಈಗ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ದ್ದರಿಂದ ಅವರುಗಳು ಜೀವನ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಬೇಕು ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಸೇನೆಯ ಮುಖಂಡ ಗಂಗಾಧರ ಕುಲಕರ್ಣಿ, ಕಾರ್ಯಕರ್ತರು, ಶ್ಯಾಮಿಯಾನದ ಅಂಗಡಿಯ ಮಾಲಿಕರು, ಕೆಲಸಗಾರರು ಭಾಗವಹಿಸಿದ್ದರು.