ಧಾರವಾಡ prajakiran.com : ರಾಜ್ಯದಲ್ಲಿ ಎರಡನೇ ಹಂತದ ಕೊರೋನ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಾ ಸಾಗಿದೆ.
ಅದರಲ್ಲೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಧಿಕವಾಗಿ ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೊರೋನ ಟೆಸ್ಟ್ ಮಾಡಿಸಿಕೊಂಡು ಮನೆಗಳತ್ತ ಸಾಗುತ್ತಿರುವ ದೃಶ್ಯ ಧಾರವಾಡ ಜಿಲ್ಲೆಯಲ್ಲಿ ಕಂಡುಬಂದಿವೆ.
ಕೊರೊನಾ ಮಹಾಮಾರಿಗೆ ಭಯಪಟ್ಟು ವಿದ್ಯಾರ್ಥಿಗಳು ತಮ್ಮ ಆರೋಗ್ಯದ ದೃಷ್ಟಿಯಿಂದ ಊರುಗಳತ್ತ ಹೊರಟ್ಟಿದ್ದಾರೆ.
ಧಾರವಾಡದ ಸರ್ಕಾರಿ ಮೆಟ್ರೀಕ್ ನಂತರ ಬಾಲಕರ ವಸತಿ ನಿಲಯ, ಗೌರಿ ಶಂಕರ ವಿದ್ಯಾರ್ಥಿನಿಲಯ ಸೇರಿದಂತೆ ವಿವಿಧ ಹಾಸ್ಟೆಲ್ ವಿದ್ಯಾರ್ಥಿಗಳು ಊರುಗಳತ್ತ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಧಾರವಾಡದಲ್ಲಿ ನಿನ್ನೆಯಷ್ಟೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ 10 ಕೊರೊನಾ ಪಾಸಿಟಿವ್ ಕೇಸ್ ಬಂದಿತ್ತು.
ಇಂದು ಹಾಸ್ಟೆಲ್ ಗಳಲ್ಲಿ ರ್ಯಾಪಿಡ್ ಟೆಸ್ಟ ನಲ್ಲಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕೊರೊನಾಗೆ ಭಯಪಟ್ಟು ಊರುಗಳತ್ತ ತೇರಳುತ್ತಿದ್ದಾರೆ.
ಧಾರವಾಡದ ಸಮಾಜ ಕಲ್ಯಾಣ ಇಲಾಖೆಗೆ ಸಂಭಂಧಪಟ್ಟ ವಸತಿ ನಿಲಯಗಳಲ್ಲಿ ಕಳೆದ ಎರಡು ದಿನಗಳಿಂದ 150 ಜನ ವಿದ್ಯಾರ್ಥಿಗಳಿಗೆ ಟೆಸ್ಟ ಮಾಡಲಾಗಿತ್ತು.
ಇಂದು ಕೊರೊನಾ ಟೆಸ್ಟ ಮಾಡುತ್ತಿರುವ ಆರೋಗ್ಯ ಇಲಾಖೆ ಟೆಸ್ಟ ಮಾಡಿಸಿಕ್ಕೊಂಡು ಕೊರೊನಾ ಟೆಸ್ಟ ಕೊಟ್ಟು ರಿಪೋರ್ಟ ಬರುವ ಮುನ್ನವೆ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬ್ಯಾಗ ಸಮೇತ ಹಾಸ್ಟೆಲ್ ನಿಂದ ಹೊರಟಿರುವ ದೃಶ್ಯಗಳು ಕಂಡುಬಂದಿವೆ.
ಅಲ್ಲದೆ, ಜಿಲ್ಲಾಡಳಿತ ಕೂಡ ಅವುಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಪರಿವರ್ತಿಸಿ ನಂತರ ರೋಗಿಗಳಿಗೆ ಆರೈಕೆ ಮಾಡಲು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಬಿಸಿಎಂ ಅಧಿಕಾರಿಗಳು ಕೊಠಡಿ ತೆರವುಗೊಳಿಸಲು ಮೌಖಿಕವಾಗಿ ಸೂಚಿಸಿದೆ.
ಒಟ್ಟಾರೆ ಧಾರವಾಡ ಜಿಲ್ಲೆಯ ಕರೋನಾ ಪಾಸಿಟಿವ್ ಸಂಖ್ಯೆ ರಾಜ್ಯದ ಟಾಪ್ ಟೆನ್ ಜಿಲ್ಲೆಯ ಪಟ್ಟಿಯಲ್ಲಿರುವುದು ಜನತೆಗೆ ಆತಂಕವುಂಟು ಮಾಡಿದೆ.