ಅರಣ್ಯ ಇಲಾಖೆಯಿಂದ ಇಂದು ರಾತ್ರಿ ಕಾರ್ಯಾಚರಣೆ :
ಧಾರವಾಡ prajakiran.com : ಇಲ್ಲಿನ ಕರ್ನಾಟಕ ವಿಶ್ವ ವಿದ್ಯಾಲಯ ಆವರಣದಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾದ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.
ಕಾಡಾನೆಯನ್ನು ಸಂರಕ್ಷಿಸಿ ಮರಳಿ ಅರಣ್ಯಕ್ಕೆ ಸೇರಿಸಕು ಅರಣ್ಯ ಇಲಾಖೆಯು ಇಂದು ಸಂಜೆಯಿಂದ ನಾಳೆ ಬೆಳಿಗ್ಗೆವರೆಗೂ ಕಾರ್ಯಾಚರಣೆ ನಡೆಸಲಿದೆ.
ಕವಿವಿ,ಪಾವಟೆ ನಗರ, ಗಣೇಶ ನಗರ, ಹನುಮಂತ ನಗರ, ಹೊಯ್ಸಳ ನಗರ, ಶಾಂಭವಿ ನಗರ, ನವೋದಯ ನಗರ,ಕಲ್ಯಾಣ ನಗರ ಮತ್ತಿತರ ಪ್ರದೇಶಗಳ ನಿವಾಸಿಗಳು,ವಿವಿಧ ಹಾಸ್ಟೇಲುಗಳ ವಿದ್ಯಾರ್ಥಿಗಳು ಅನಗತ್ಯವಾಗಿ ಹೊರಗೆ ಸಂಚರಿಸಬಾರದು,
ಗುಂಪು ಸೇರಿ ಗೊಂದಲದ ವಾತಾವರಣ ಸೃಷ್ಟಿಸಬಾರದು.ಅರಣ್ಯ ಇಲಾಖೆಯು ಕಾಡಾನೆಯನ್ನು ಸಂರಕ್ಷಿಸಿ ,ಜನರಿಗೆ ತೊಂದರೆಯಾಗದಂತೆ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಸಹಜತೆ ತರಲಾಗುವುದು.
ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.