ರಾಜ್ಯ

ಮೆಡಿಕಲ್ ಕಾಲೇಜ್ ವಸತಿ ಗೃಹಕ್ಕೆ ಬಂದು ಹೋದ ಚಿರತೆ……!

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com ರಾತ್ರಿಯ ವೇಳೆಯಲ್ಲಿ ಚಿರತೆಯೊಂದು ಮೆಡಿಕಲ್ ಕಾಲೇಜ್ ವಸತಿಗೃಹಕ್ಕೆ ಬಂದು ಹೋದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಇದು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದ ಆತಂಕ ಹೆಚ್ಚಿಸಿದೆ. ಚಿರತೆ ಬಂದು ಹೋಗಿರುವ ಘಟನೆ ಮೆಡಿಕಲ್ ಕಾಲೇಜ್ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಮೆಡಿಕಲ್ ಕಾಲೇಜು ಸುತ್ತಮುತ್ತಲು ಬೆಟ್ಟ ಗುಡ್ಡಗಳಿಂದ ಕುಡಿದ್ದು. ಇಲ್ಲಿ ಚಿರತೆ, ಸಾರಂಗ ಹಾಗೂ ನವಿಲು ಹಾಗೂ ಇನ್ನು ಮುಂತಾದ ಪ್ರಾಣಿಗಳಿವೆ ಎಂದು ತಿಳಿದು ಬಂದಿದೆ. ಸುತ್ತಲೂ ಸಾಮಾಜಿಕ ಅರಣ್ಯ […]

ರಾಜ್ಯ

ಧಾರವಾಡದ ಕಲಘಟಗಿಯಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹ ತಡೆದ ಇ.ಆರ್.ಎಸ್.ಎಸ್-112

ಧಾರವಾಡ prajakiran.com : ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಗಟ್ಟಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆ 14 ನಿಮಿಷಕ್ಕೆ ಬಾಲ್ಯ ವಿವಾಹ ನಡೆಸುತ್ತಿರುವುದಾಗಿ ಇ.ಆರ್.ಎಸ್.ಎಸ್-112 ನೇದ್ದಕ್ಕೆ ಕರೆ ಬಂದಿತ್ತು. ಅದನ್ನು ಆಲಿಸಿದ ಪೊಲೀಸ್ ಕಂಟ್ರೋಲ್‌ ರೂಂ ಸಿಬ್ಬಂದಿ ತಕ್ಷಣ ಇ.ಆರ್.ಎಸ್.ಎಸ್-6 ವಾಹನದವರಿಗೆ ತಿಳಿಸಿದ ಕೇವಲ 15 ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ಈ ಕುರಿತು ವಿಚಾರಿಸಿದಾಗ 15 ವರ್ಷದ ಬಾಲಕಿಗೆ ವಿವಾಹ ನಡೆಸುತ್ತಿರುವುದನ್ನು ಖಚಿತ ಪಡಿಸಿಕೂಂಡು ನಡೆಯುತ್ತಿದ್ದ ವಿವಾಹವನ್ನು ತಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ […]

ರಾಜ್ಯ

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಸ್ತೆ ಅಭಿವೃದ್ಧಿಗೆ 1000 ಕೋಟಿ ಬಿಡುಗಡೆ

ಹುಬ್ಬಳ್ಳಿ prajakiran.com: ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪ್ರಮುಖ ರಸ್ತೆಗಳನ್ನು ಕೇಂದ್ರ ರಸ್ತೆ ನಿಧಿ(ಸಿ.ಆರ್.ಎಫ್) ಅಡಿ ನಿರ್ಮಾಣ ಮಾಡಲಾಗುತ್ತಿದೆ.  ಉಳಿದ ರಸ್ತೆಗಳ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ನೀಡುವಂತೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು ಪ್ರಸ್ತಾವನೆಗೆ ಒಪಿಗ್ಪೆ ನೀಡಿದ್ದು, ಶೀಘ್ರವಾಗಿ ಸಾವಿರ ಕೋಟಿ ರುಪಾಯಿಗಳನ್ನು ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು. ಅವರು ನಗರದ ಐ.ಟಿ. ಪಾರ್ಕನ ಕೆ.ಯು.ಡಿ.ಎಫ್.ಸಿ ಸಭಾಂಗಣದಲ್ಲಿ ಜರುಗಿದ […]

ರಾಜ್ಯ

ಧಾರವಾಡದಲ್ಲಿ ಪಿಡಿಓ ಮನೆ ಮೇಲೆ ಎಸಿಬಿ ದಾಳಿ….!

ಧಾರವಾಡ prajakiran.com : ಪಿಡಿಓ ಮನೆ ಮೇಲೆ ಎಸಿಬಿ ದಾಳಿ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮಬಪಂಚಾಯತ್ ಪಿಡಿಓ ಮನೆ ಮೇಲೆಯೇ ಈ ದಾಳಿ ನಡೆದಿದೆ. ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರೋ ಪಿಡಿಓ ಪುಷ್ಪಾ ಮೇದಾರ ಮನೆ ಮೇಲೆ ದಾಳಿ ನಡೆಸಲಾಗಿದೆ. ಜಮೀನು ಎನ್.ಎ. ಸಲುವಾಗಿ ಲಂಚ ಕೇಳಿದ್ದ ಪುಷ್ಪಾ, ತನ್ನ ಗಂಡ ಮಹಾಂತೇಶ್ ಮೂಲಕ ಹಣದ ಬೇಡಿಕೆಯಿಟ್ಟಿದ್ದಳು. ಸಾಗರ ಹೂಗಾರ ಎನ್ನುವವರಿಗೆ 20 ರೂ. ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಈ […]

ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಬಿಡುಗಡೆಗೆ ದರ್ಗಾ, ಮಂದಿರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಆದಷ್ಟು ಬೇಗ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಹೊರಬರಲಿ ಎಂದು ಪ್ರಾರ್ಥಿಸಿ, ಧಾರವಾಡದ ಷಾ ವಲಿ ಖಾದ್ರಿ ದರ್ಗಾದಲ್ಲಿ 5 ನೇ ವಾರ್ಡಿನ ಮುಸ್ಲಿಂ ಸಮುದಾಯದ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಫೀ ಕಳ್ಳಿಮನಿ, ಮುಸ್ತಾಕ್ ಶೇಖ ಸನದಿ, ಯೂನುಸ್ ಬರಗೆರ, ಹಾಶಿಂ ಮುಂಜಾವಿನಲಿ, ಹಾಗೂ […]

ರಾಜ್ಯ

ಬಸವಣ್ಣನವರ ಸಿದ್ಧಾಂತಗಳಿಗೆ ಚ್ಯುತಿ ಬರದ ಹಾಗೆ ಅನುಭವ ಮಂಟಪ ನಿರ್ಮಿಸಿ

ಧಾರವಾಡ prajakiran.com : ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ 12ನೇ ಶತಮಾನದ ಅನುಭವ ಮಂಟಪದ ಪರಿಕಲ್ಪನೆಯನ್ನು ದಾರಿ ತಪ್ಪಿಸುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆರೆಸ್ಸಸ್ ಭೂತ ಇನ್ನೂ ಬಿಟ್ಟಿಲ್ಲ ಎಂದು ಕಿಡಿ ಕಾರಿದ್ದಾರೆ. ಸನಾತನ ಧರ್ಮದ ತತ್ವ ಸಿದ್ದಾಂತಗಳ ವಿರುದ್ಧ ಬಸವಣ್ಣನವರ ವಿಚಾರ ಧಾರೆಗಳಿವೆ. ಅವುಗಳು ಈ ಅನುಭವ ಮಂಟಪದ ಮುಖಾಂತರ ಜಗತ್ತಿಗೆ ಪರಿಚಯಿಸಲ್ಪಟ್ಟಿವೆ. ಆದರೆ, ಬಿಜೆಪಿ ಸರಕಾರ ಅದೇ ಅನುಭವ ಮಂಟಪವನ್ನು ಮೂಲ ಸನಾತನ […]

ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮುಂದಿನ ವಾರಕ್ಕೆ ಮುಂದೂಡಿದ ಹೈಕೋರ್ಟ್

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಧಾರವಾಡ ಹೈಕೋರ್ಟ್ ಮುಂದೂಡಿದೆ. ಧಾರವಾಡದ ಹೈಕೋರ್ಟ್ ಎಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ನಟರಾಜ್ ಅವರು ಈ ಮಹತ್ವದ ಆದೇಶ ಹೊರಡಿಸಿದರು. ಧಾರವಾಡ ಹೈಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಇಂದು ತಕರಾರು ಅರ್ಜಿಯನ್ನು ಸಲ್ಲಿಸಬೇಕಿತ್ತು. ಆದರೆ, ಸಿಬಿಐ ಪರ ವಕೀಲರು ಮತ್ತಷ್ಟು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು […]

ರಾಜ್ಯ

ನಕಲಿ ಅಂಕ ಪಟ್ಟಿ ನೀಡಿದ್ದ ವಿದ್ಯಾರ್ಥಿನಿ ವಿರುದ್ಧ ಕೊನೆಗೂ ದೂರು ದಾಖಲು ….!

ಧಾರವಾಡ prajakiran.com : ನಕಲಿ ಅಂಕ ಪಟ್ಟಿ ನೀಡಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿ ವಿರುದ್ಧ ಧಾರವಾಡದ ಉಪನಗರ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಅಶ್ವಿತಾ ಗುನಗಾ ಎಂಬುವವರೇ ಬಿ.ಕಾಂ. 6 ನೇ ಸೆಮಿಸ್ಟರ್‌ನ ನಕಲಿ ಅಂಕಪಟ್ಟಿ ಸಿದ್ಧಪಡಿಸಿ ಎಂ.ಕಾಂ. ಪದವಿಗೆ ಪ್ರವೇಶ ಪಡೆದಿದ್ದರು. ನಕಲಿ ಅಂಕಪಟ್ಟಿ ಸಿದ್ಧಪಡಿಸಲು ಸುದರ್ಶನ ಎಂಬ ವ್ಯಕ್ತಿಗೆ ಅವರು ಹಣ ನೀಡಿದ್ದರು. ಈ ಕಾರ್ಯದಲ್ಲಿ ಅಶ್ವಿತಾ ಅವರಿಗೆ ಅಶ್ವಿನ್ ಗುನಗಾ, ಅರುಣ್ ಗುನಗಾ ಹಾಗೂ ಅನೂಪ್ ಡಂಬಳ […]

ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಬಿಡುಗಡೆಗೆ ಪ್ರಾರ್ಥಿಸಿ ದೇವರ ಮೊರೆ ಹೋದ ಅಭಿಮಾನಿಗಳು

ಧಾರವಾಡ prajakiran.com : ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಂಧಿಸಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಬಿಡುಗಡೆಗೆ ಪ್ರಾರ್ಥಿಸಿ ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಧಾರವಾಡದ ಕಮಲಾಪುರದಲ್ಲಿರುವ ಪತ್ರೇಪ್ಪಜ್ಜ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆದಷ್ಟು ಬೇಗ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಹೊರಬರಲಿ ಎಂದು ಬೇಡಿಕೊಂಡರು. ನ.5 ರಂದು ಸಿಬಿಐ ಅಧಿಕಾರಿಗಳು ಅವರ ನಿವಾಸದಿಂದ ಕರೆದುಕೊಂಡು ಹೋಗಿ ಆನಂತರ ಹೆಚ್ಚಿನ ವಿಚಾರಣೆಗೆ ವಶಕ್ಕೆ ತೆಗೆದುಕೊಂಡು ಬಳಿಕ ನ್ಯಾಯಾಂಗ […]

ರಾಜ್ಯ

ವಿಧಾನಸೌಧದವರೆಗೂ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದ ಪಂಚಮಸಾಲಿ ಪೀಠದ ಸ್ವಾಮೀಜಿ

ಧಾರವಾಡ prajakiran.com : ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ವಿಧಾನಸೌಧದವರೆಗೂ ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ನಾವು ಒಂದು ದಿನ ಉಪವಾಸ ಸತ್ಯಾಗ್ರಹ ಮಾಡಿದಾಗ ಸಿಎಂ ಯಡಿಯೂರಪ್ಪನವರು ಪಂಚಮಸಾಲಿ ಸಮಯದಾಯವನ್ನು 2ಎ ಸೇರಿಸಲಾಗುವುದು ಎಂದು ದೂರವಾಣಿ ಕರೆ ಮೂಲಕ ಹೇಳಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದರು. ಆದರೆ, ಇದುವರೆಗೂ […]