ಧಾರವಾಡ prajakiran.com : ಪಿಡಿಓ ಮನೆ ಮೇಲೆ ಎಸಿಬಿ ದಾಳಿ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮಬಪಂಚಾಯತ್ ಪಿಡಿಓ ಮನೆ ಮೇಲೆಯೇ ಈ ದಾಳಿ ನಡೆದಿದೆ.
ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರೋ
ಪಿಡಿಓ ಪುಷ್ಪಾ ಮೇದಾರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಜಮೀನು ಎನ್.ಎ. ಸಲುವಾಗಿ ಲಂಚ ಕೇಳಿದ್ದ ಪುಷ್ಪಾ,
ತನ್ನ ಗಂಡ ಮಹಾಂತೇಶ್ ಮೂಲಕ ಹಣದ ಬೇಡಿಕೆಯಿಟ್ಟಿದ್ದಳು.
ಸಾಗರ ಹೂಗಾರ ಎನ್ನುವವರಿಗೆ 20 ರೂ. ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಸಾಗರ ಎಸಿಬಿ ಮೊರೆ ಹೋಗಿದ್ದರು. ಖಚಿತ ಮಾಹಿತಿ ಮೇರೆಗೆ
ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.