ಬೆಳಗಾವಿ prajakiran.com : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಧಾರಕಾರ ಮಳೆ ಹಲವರನ್ನು ಬೀದಿಪಾಲು ಮಾಡಿದೆ.
ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದ ಕುಟುಂಬವೊಂದು ಕಳೆದ ನಾಲ್ಕು ದಿನಗಳಿಂದ ರಸ್ತೆ ಬದಿಯೇ ಟ್ರ್ಯಾಕ್ಟರ್ ಟ್ರೇಲರ್ ನಲ್ಲಿಯೇ, ಐವರು ಮಕ್ಕಳು, ಹಿರಿಯರು ಸಮೇತ ವಾಸವಾಗಿದ್ದಾರೆ.
ಘಟಪ್ರಭಾ ಪ್ರವಾಹಕ್ಕೆ ಸಿಲುಕಿದ ಇವರ ಮನೆಗೆ ನೀರು ನುಗ್ಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗದೆ, ನಾಲ್ಕು ಕಿ,ಮೀ ದೂರ ಬಂದು ರಸ್ತೆ ಬದಿಯಲ್ಲಿಯೇ ಇದ್ದಾರೆ.
ಇದು ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯತನ ತೋರಿಸುತ್ತದೆ. ಅವರೆಲ್ಲಾ ಇದೇ ರಸ್ತೆಯಲ್ಲಿ ಅಲೆದಾಡಿದರೂ ಯಾರೊಬ್ಬರು ಇವರ ಗೋಳು ಕೇಳಿಲ್ಲ.
ಆಹಾರ ವ್ಯವಸ್ಥೆ ಮಾಡಿಲ್ಲ. ಪುಟ್ಟ ಪುಟ್ಟಮಕ್ಕಳ ಜೊತೆಗೆ ಕಳೆದ ನಾಲ್ಕು ದಿನಗಳಿಂದ ಒಟ್ಟು ಎಂಟು ಜನ ಕಾಲ ಕಳೆಯುತ್ತಿದ್ದಾರೆ.
ಅದು ಟ್ರೇಲರ್ ಬಾಡಿಗೆ ಪಡೆದಿದ್ದಾರೆ ಎಂದು ಮಹಿಳೆ ಕಣ್ಣೀರು ಹಾಕಿದ್ದಾಳೆ.ದಿನ ನಿತ್ಯ ಇದೇ ರಸ್ತೆಯಲ್ಲಿ ಓಡಾಡುವ ಅಧಿಕಾರಿಗಳಿಗೆ ಇವೆಲ್ಲಾ ಕಾಣಲ್ವಾ ಎಂಬ ಪ್ರಶ್ನೆ ಎದುರಾಗಿದೆ.
ಜೊತೆಗೆ ಕ್ಲಿಷ್ಟಕರ ಪರಿಸ್ಥಿತಿಗೂ ಅಧಿಕಾರಿಗಳು ಸ್ಪಂದಿಸರುವುದು ನೋವಿನ ಸಂಗತಿಯಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಸ್ಪಂದಿಸುತ್ತಾರಾ ಎಂಬುದು ಕಾದು ನೋಡಬೇಕಿದೆ.