ರಾಜ್ಯ

ಬೆಳಗಾವಿಯಲ್ಲಿ ಮಳೆ ಹೊಡೆತಕ್ಕೆ ಟ್ರ್ಯಾಕ್ಟರ್ ಅಡಿ ಜೀವನ…!

ಬೆಳಗಾವಿ prajakiran.com : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಧಾರಕಾರ ಮಳೆ ಹಲವರನ್ನು ಬೀದಿಪಾಲು ಮಾಡಿದೆ. ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದ ಕುಟುಂಬವೊಂದು ಕಳೆದ ನಾಲ್ಕು ದಿನಗಳಿಂದ ರಸ್ತೆ ಬದಿಯೇ ಟ್ರ್ಯಾಕ್ಟರ್ ಟ್ರೇಲರ್ ನಲ್ಲಿಯೇ, ಐವರು ಮಕ್ಕಳು, ಹಿರಿಯರು ಸಮೇತ ವಾಸವಾಗಿದ್ದಾರೆ. ಘಟಪ್ರಭಾ ಪ್ರವಾಹಕ್ಕೆ ಸಿಲುಕಿದ ಇವರ ಮನೆಗೆ ನೀರು ನುಗ್ಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗದೆ, ನಾಲ್ಕು ಕಿ,ಮೀ ದೂರ ಬಂದು ರಸ್ತೆ ಬದಿಯಲ್ಲಿಯೇ […]

ರಾಜ್ಯ

ಘಟಪ್ರಭಾ ಪ್ರವಾಹ : ನೂರಾರು ಮನೆಗಳು, ದೇವಸ್ಥಾನ ಜಲಾವೃತ….!

ಬಾಗಲಕೋಟೆ prajakiran.com : ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಯೂ ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಸಂಕಷ್ಟ ಮುಂದುವರೆದಿದೆ. ಈ ನದಿ ಪಾತ್ರದ ಹಲವು ಹಳ್ಳಿಗಳ ಜನಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದು, ಅಲ್ಲಿಯ ಜನ ಮಳೆಯಲ್ಲಿ ಸಿಲುಕಿ ನರುಳುತ್ತಿದ್ದಾರೆ. ಭಾರೀ ಮಳೆಗೆ ನೂರಾರು ಮನೆಗಳು ಜಲಾವೃತಗೊಂಡಿವೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಅವರ ತವರು ಕ್ಷೇತ್ರ ಮುಧೋಳದ ಮಿರ್ಜಿ ಯಲ್ಲಿಯೇ 50 ಮನೆಗಳು ಜಲಾವೃತಗೊಂಡಿವೆ. ಅದೇ ರೀತಿ ಮಾಚಕನೂರು ಚಿಕ್ಕೂರು ಸೇತುವೆ ಮುಳಗಡೆಯಾಗಿದೆ. ಇದರಿಂದಾಗಿ, ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಮಾಚಕನೂರಿನ ಹೊಳೆ […]