ಅಪರಾಧ

ಕಿರುತೆರೆ  ನಟಿ ಚಂದನಾಗೆ ವಂಚಿಸಿದ್ದ ಆರೋಪಿ ದಿನೇಶ್ ಬಂಧನ

ಬೆಂಗಳೂರು prajakiran.com : ಹಾಸನ ಮೂಲದ ಕಿರುತೆರೆ  ನಟಿ ಚಂದನಾಗೆ ವಂಚಿಸಿದ್ದ ಆರೋಪದ ಹಿನ್ನಲೆಯಲ್ಲಿ ಆರೋಪಿ ದಿನೇಶ್ ನನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರಿನ ಬೆರಣಗೊಡುವಿನಲ್ಲಿ ತಲೆಮರೆಸಿಕೊಂಡಿದ್ದ ದಿನೇಶ ನನ್ನು ಬೆಂಗಳೂರಿನ ಸದ್ದುಗುಂಟೆಪಾಳ್ಯದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬೇಲೂರು ತಾಲೂಕಿನವಾಗಿನಕೆರೆ ಮೂಲದ ಇಂಜಿನಿಯರ್ ಆಗಿದ್ದ ಇತ ತನ್ನ ಸ್ನೇಹಿತನ ಮನೆಯಲ್ಲಿ ಅವಿತುಕೊಂಡಿದ್ದ ಬಗ್ಗೆ ಪೊಲೀಸರು ಸುಳಿವು ಅರಿತು ಬಂಧಿಸಿಕರೆತಂದಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಮೇ 28ರಂದು ನಟಿ ಚಂದನಾ ವಿಷ […]

ಅಪರಾಧ

ಧಾರವಾಡದಲ್ಲಿ ಬ್ಯಾಟ್ ಖರೀದಿಸಿ ಹಣ ಕೊಡದೆ ಆತನನ್ನೇ ತಳ್ಳಿ ಕೊಂದ ಖದೀಮರು ಅಂದರ್…!  

ಧಾರವಾಡ prajakiran.com : ಖರೀದಿಸಿದ ಬ್ಯಾಟ್ ಗೆ ಹಣ ಕೊಡದೆ ಖದೀಮರು ಆತನ ಪ್ರಾಣಪಕ್ಷಿಯನ್ನೇ ಕಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾನಗರಿ ಧಾರವಾಡದ ಗಾಂಧಿ ನಗರದ ಪುಟ್ ಪಾತ್ ಮೇಲೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಮಹಾರಾಷ್ಟ್ರದಿಂದ ಬಂದಿದ್ದ ಬ್ಯಾಟ ತಯಾರಿಸಿ ಮಾರುವ ಕುಟುಂಬದ ಯುವಕನೊಬ್ಬ ಈ ಖದೀಮರ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಮೃತನನ್ನು  ಮಹಾರಾಷ್ಟ್ರ ದ ಮಂಗಲ ನತ್ತು ಮೋರೆ  (21) ಎಂದು ಗುರುತಿಸಲಾಗಿದೆ. ಇತನ ಬಳಿ ಬ್ಯಾಟ್ ಖರೀದಿಸಿದ ತಡಸಿನಕೊಪ್ಪ ಗ್ರಾಮದ […]

ಅಪರಾಧ

ತಂಗಿ ರಕ್ಷಣೆಗೆ ಹೋದ ಅಣ್ಣ-ತಂಗಿ ನೀರು ಪಾಲು…!

ಬೆಳಗಾವಿ prajakiran.com : ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿ ಅಣ್ಣ-ತಂಗಿ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಅಥಣಿ ತಾಲೂಕಿನ ಗುಂಡೆವಾಡಿ ಗ್ರಾಮದ ಕೃಷಿ ಹೊಂಡದಲ್ಲಿ ಈ ರ್ದುಘಟನೆ ನಡೆದಿದೆ. ತಮ್ಮ ಜಮೀನಿನ ಕೆಲಸ ಕಾರ್ಯಗಳಿಗೆಅನುಕೂಲವಾಗಲೆಂದು ಹೊಲದಲ್ಲಿ ತೆಗೆಸಿದ್ದ ಆ ಕೃಷಿ ಹೊಂಡ ರೈತನಿಗೆ ವರವಾಗುವ ಬದಲಿಗೆ ಶಾಪವಾಗಿ ಪರಿಣಮಿಸಿದೆ.  ಆ ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿ 13 ವರ್ಷದ ಸನ್ಮತಿ ನ್ಯಾಮಣ್ಣ ಕುಪ್ಪವಾಡ ಹಾಗೂ 15 ವರ್ಷದ ಪಾರ್ಶ್ವನಾಥ  ನ್ಯಾಮಣ್ಣ ಕುಪವಾಡ ಸಾವನ್ನಪ್ಪಿದ್ದಾರೆ ಎಂದು […]

ಅಪರಾಧ

ಹಾಡಹಗಲೇ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ : ಅಮಾಯಕನ ಬಲಿ …!?

ಮಂಗಳೂರು prajakiran.com : ಹಾಡಹಗಲೇ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದ ಪರಿಣಾಮಅವರನ್ನು ಸಮಧಾನಪಡಿಸಲು ಮಧ್ಯ ಪ್ರವೇಶಿಸಿ  ಅಮಾಯಕನೊಬ್ಬ ಬಲಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಮುಲ್ಕಿಯಲ್ಲಿ ನಡೆದಿದೆ. ಅಬ್ದುಲ್ ಲತೀಫ್ ಎಂಬಾತನೇ ಎರಡು ಗುಂಪುಗಳ ಗ್ಯಾಂಗ್ ವಾರ್ ಗೆ ಬಲಿಯಾದಅಮಾಯಕನಾಗಿದ್ದಾನೆ. ಅಬ್ದುಲ್ ಲತೀಫ್ ಚಿನ್ನದ ಅಂಗಡಿ ಇಟ್ಟುಕೊಂಡಿದ್ದ. ಇತ ಕಳೆದ ಒಂದು ದಿನದ ಹಿಂದೆಯಷ್ಟೇ ಮಾವನ ಮನೆಗೆ ಬಂದಿದ್ದ. ಮಾವ ಮುನೀರ್ ಗ್ಯಾಂಗ್ ಮೇಲೆ ಆತನ ವಿರುದ್ದದ ಹಕೀಂ ಗ್ಯಾಂಗ್ ವಾರ್ ಮಾಡಿತ್ತು. ಮಾವ ಮುನಿರ್ […]

ಅಪರಾಧ

ಲಾಕಡೌನ್ ಸಂಕಷ್ಟ : ನೇಕಾರ ಕೂಲಿ ಕಾರ್ಮಿಕ ಆತ್ಮಹತ್ಯೆ

ಬೆಳಗಾವಿ prajakiran.com : ಲಾಕಡೌನ್ ಸಂಕಷ್ಟಕ್ಕೆ ಸಿಲುಕಿ ನರಳಿದ ನೇಕಾರ ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ವಡಗಾವಿ ಲಕ್ಷ್ಮೀ ನಾಗರ ನಿವಾಸಿ ಸುಜೀತ ಉಪರಿ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಜೀತ ಇದಕ್ಕೂ ಮುನ್ನ ಹೆಂಡ್ತಿ ಮಕ್ಕಳನ್ನ ತವರು ಮನೆಗೆ ಕಳುಹಿಸಿದ್ದ ಎಂದು ಗೊತ್ತಾಗಿದೆ. ಕಳೆದ ವರ್ಷ ಪ್ರವಾಹದಿಂದ ಬಳಲಿದ್ದು, ಆ ಕಹಿ ಘಟನೆ ಮರೆಯುವ ಮುನ್ನವೇ ಈ ವರ್ಷ ಲಾಕಡೌನ್ ಸಂಕಷ್ಟ ದಿಂದ ತತ್ತರಿಸಿ  […]

ಅಪರಾಧ

ಧಾರವಾಡ ಕೇಂದ್ರ ಕಾರಾಗೃಹ ಸಿಬ್ಬಂದಿ ಮೇಲೆ ಖೈದಿ ಹಲ್ಲೆ …!?

ಧಾರವಾಡ prajakiran.com : ಇಲ್ಲಿನ ಕೇಂದ್ರ ಕಾರಾಗೃಹದ ಸಿಬ್ಬಂದಿ ಮೇಲೆ ಖೈದಿಯೊಬ್ಬ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೇಂದ್ರ ಕಾರಾಗೃಹದ ಪ್ರಥಮ ದರ್ಜೆ ಸಹಾಯಕ ಕೆ.ಎಸ್. ವಾವರೆ ಅವರೇ ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ. ಸಜಾ ಖೈದಿ ಅವಿನಾಶ ಬಾಜಿಲಕೇರಿ ಹಾಗೂ ಪ್ರಭಾಕರ ನಾಯಕ ಎಂಬುವರು ಹಲ್ಲೆ ನಡೆಸಿದ್ದಾರೆ  ಎನ್ನಲಾಗಿದೆ. ಮೇ 28ರಂದು ವಾವರೆ ಅವರೊಂದಿಗೆ ಸುಖಾಸುಮ್ಮನೆ ಜಗಳ ತೆಗೆದ ಖೈದಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆ ಸಹ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು […]

ಅಪರಾಧ

ಬೆಂಗಳೂರು ಜೈಲಿನಲ್ಲಿದ್ರೂ ನಿಲ್ಲದ ಕ್ಯಾಟ್ ರಾಜನ ಉಪಟಳ….!

ಬೆಂಗಳೂರು prajakiran.com :  ಜೈಲಿನಲ್ಲಿದ್ರೂ ಕ್ಯಾಟ್ ರಾಜನ ಉಪಟಳ ನಿಲ್ಲದಿರುವುದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಟ್ ರಾಜ ರೌಡಿಶೀಟರ್ ಲಕ್ಷ್ಮಣನ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆತ ಜೈಲಿನಲ್ಲಿದ್ದುಕೊಂಡೇ ಜಾಮೀನಿಗಾಗಿ ಸ್ವಂತ ಭಾವನ ಕೊಲೆಗೆ ಸುಪಾರಿ ನೀಡಿದ್ದಾನೆ. ತನ್ನ ಶಿಷ್ಯಂದಿರ ಮೂಲಕ ಪತ್ನಿಯ ತಮ್ಮನ ಕೊಲೆಗೆ ಯತ್ನ ನಡೆಸಿರುವುದು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಹಾಡಹಗಲೇ ಸಂದೀಪ್ ರೆಡ್ಡಿ ಎಂಬಾತನ ಕೊಲೆಗೆ ಯತ್ನ ಮಾಡಿದ ಹಿನ್ನಲೆಯಲ್ಲಿ ಯಲಹಂಕ ಠಾಣಾ ಪೊಲೀಸರಿಂದ ಹತ್ಯೆಗೆ ಯತ್ನಿಸಿದ ಐವರು ಅರೋಪಿಗಳ ಹೆಡೆಮುರಿ […]

ಅಪರಾಧ

ಲಾಕ್‌ಡೌನ್ ಉಲ್ಲಂಘಿಸಿದ  ಧಾರವಾಡ ಕಾಂಗ್ರೆಸ್ ಮುಖಂಡರ ವಿರುದ್ದ ದೂರು ದಾಖಲು

ಧಾರವಾಡ prajakiran.com : ಕರೋನಾ ಲಾಕ್‌ಡೌನ್ ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಜನುಮ ದಿನಕ್ಕಾಗಿ ಬೃಹತ್ ಪೆಂಡಾಲ್ ಹಾಕಿ, ಸಮಾರಂಭ ಆಯೋಜಿಸಿದ್ದ ಧಾರವಾಡ ಕಾಂಗ್ರೆಸ್ ಮುಖಂಡರ ವಿರುದ್ದ ದೂರು ದಾಖಲು  ಆಗಿದೆ. ಈ ಘಟನೆ ವಿದ್ಯಾನಗರಿ ಧಾರವಾಡದ ತಡಸಿನಕೊಪ್ಪದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.   ಈ ಕಾರ್ಯಕ್ರಮ ನಡೆಯುವ ಮುನ್ನವೇ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೊಲೀಸರು ಘಟನಾ ಸ್ಥಳದ ಮೇಲೆ ದಾಳಿ ನಡೆಸಿ   ಪೆಂಡಾಲ್  ಹಾಗೂ ಸೌಂಡ್ ಬ್ಯಾಕ್ಸ್ ಸೀಜ್ ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ, […]

ಅಪರಾಧ

ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ನಟಿ ಚಂದನಾ

ಬೆಂಗಳೂರು prajakiran.com : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ನಟಿ ಚಂದನಾ ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೇ 28ರಂದೇ ಈ ಆತ್ಮಹತ್ಯೆ ನಡೆದಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ.  ಆಕೆಯ ಸಾವಿಗೆ ಬಾಯ್ ಫ್ರೇಂಡ್ ದಿನೇಶ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಟಿ ಚಂದನಾ ಹಾಗೂ ಖಾಸಗಿ ಕಂಪನಿ ನೌಕರ ದಿನೇಶ್  ಪರಸ್ಪರ ಪ್ರೀತಿಸಿದ್ದರು. ಇಬ್ಬರು ಜೊತೆಗೆ ಓಡಾಡಿದ್ದರು. ಅಲ್ಲದೆ, ಮದುವೆಯಾಗುವುದಾಗಿ ದೈಹಿಕ ಸಂಪರ್ಕ […]

ಅಪರಾಧ

ಪೊಲೀಸ್ ಠಾಣೆ ಎದುರೇ ಎರಡು ಗುಂಪುಗಳ ಹೊಡೆದಾಟ …!

ಬಳ್ಳಾರಿ prajakiran.com : ಪೊಲೀಸ್ ಠಾಣೆಯ ಎದುರೇ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡ   ಘಟನೆ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ನಡೆದಿದೆ. ಭಾನುವಾರ ಎರಡು ಗುಂಪುಗಳು ಪರಸ್ಪರ ದೂರು ಪ್ರತಿ ದೂರು ನೀಡಲು ಬಂದಿದ್ದವು. ಈ ವೇಳೆ  ಅವಾಚ್ಯ ಶಬ್ದಗಳ ನಿಂದನೆ ಮಾಡಿಕೊಂಡಅವರು ಕೈ ಕೈ ಮಿಲಾಯಿಸಿದ್ದಾರೆ. ಇದರಿಂದಾಗಿ  ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲದೆ, ಘಟನೆಯಲ್ಲಿ ಪೊಲೀಸ್ ಠಾಣೆಯ ಬಾಗಿಲು ಜಖಂಗೊಂಡಿದೆ. ಇದರಿಂದ ಕೆಂಡಾಮಂಡಲಗೊಂಡ ಪೊಲೀಸರು ಕೊನೆಗೆ ರೊಚ್ಚಿಗೆದ್ದ ಎರಡು […]