ಬೆಳಗಾವಿ prajakiran.com : ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿ ಅಣ್ಣ-ತಂಗಿ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಅಥಣಿ ತಾಲೂಕಿನ ಗುಂಡೆವಾಡಿ ಗ್ರಾಮದ ಕೃಷಿ ಹೊಂಡದಲ್ಲಿ ಈ ರ್ದುಘಟನೆ ನಡೆದಿದೆ.
ತಮ್ಮ ಜಮೀನಿನ ಕೆಲಸ ಕಾರ್ಯಗಳಿಗೆಅನುಕೂಲವಾಗಲೆಂದು ಹೊಲದಲ್ಲಿ ತೆಗೆಸಿದ್ದ ಆ ಕೃಷಿ ಹೊಂಡ ರೈತನಿಗೆ ವರವಾಗುವ ಬದಲಿಗೆ ಶಾಪವಾಗಿ ಪರಿಣಮಿಸಿದೆ.
ಆ ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿ 13 ವರ್ಷದ ಸನ್ಮತಿ ನ್ಯಾಮಣ್ಣ ಕುಪ್ಪವಾಡ ಹಾಗೂ 15 ವರ್ಷದ ಪಾರ್ಶ್ವನಾಥ ನ್ಯಾಮಣ್ಣ ಕುಪವಾಡ ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ
ದಿನಾಲು ಕೃಷಿ ಹೋಂಡಕ್ಕೆ ಹೋಗುತ್ತಿದ್ದಂತೆ ನಿನ್ನೇ ಶನಿವಾರ ಕೂಡ ಸನ್ಮತಿ ಬೆನ್ನಿಗೆ ಕ್ಯಾನ್ ಕಟ್ಟಿಕೊಂಡು ಈಜುವ ಸಮಯದಲ್ಲಿ ಕ್ಯಾನ್ ಬಿಚ್ಚಿದ ಕಾರಣದಿಂದಾಗಿ ತಂಗಿ ಮುಳುಗುವುದನ್ನು ಕಂಡು ತಂಗಿಯನ್ನು ಪ್ರಾಣಾಪಾಯದಿಂದ
ಪಾರು ಮಾಡಲು ಹೋಗಿ ಅದೇ ನೀರಿನಲ್ಲಿ ಅಣ್ಣ ಕೂಡ ಸಾವನ್ನಪ್ಪಿದ್ದಾನೆಎಂದು ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.