ರಾಜ್ಯ

ತಳ್ಳೋಗಾಡಿಯಲ್ಲಿ ಪತಿಯ ಶವ ಹಾಕಿಕೊಂಡು ಬಲು ದೂರ ಸಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಪತ್ನಿ

ಬೆಳಗಾವಿ  prajakiran.com :  ತಳ್ಳೋಗಾಡಿಯಲ್ಲಿ ಪತಿಯ ಶವ ಹಾಕಿಕೊಂಡು ಬಲು ದೂರ ಸಾಗಿದ ಪತ್ನಿಯೇ ತನ್ನ ಪತಿಯ ಅಂತ್ಯಸಂಸ್ಕಾರ ಮಾಡಿದ ಹೃದಯವಿದ್ರಾವಕ ಘಟನೆ  ಡಿಸಿಎಂ ಲಕ್ಷ್ಮಣ ಸವದಿ ತವರು ಜಿಲ್ಲೆಯಾದ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹೌದು ಇಂತಹ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಮೃತ ವ್ಯಕ್ತಿ ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂದೆ ಚಪ್ಪಲಿ ಹೊಲೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಏನೇ ಇದ್ದರೂ ಇಂತಹ ಸನ್ನಿವೇಶಗಳನ್ನ ನೋಡಿಯಾದರೂ ಯಾರೊಬ್ಬರು ಸಹಾಯ ಹಸ್ತ […]

ರಾಜ್ಯ

ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ, ನಿಪ್ಪಾಣಿ ಲಾಕ್‌ಡೌನ್

ಬೆಳಗಾವಿ prajakiran.com : ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯಲ್ಲಿ ಮಾತ್ರ ದಿನಾಂಕ:14.07.2020ರ ರಾತ್ರಿ 8.00 ಗಂಟೆಯಿಂದ 22.07.2020ರ ಬೆಳಿಗ್ಗೆ 5.00 ಗಂಟೆಯವರೆಗೆ 7 ದಿನಗಳ ಅವಧಿಯವರೆಗೆ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಘೋಷಿಸಿದ್ದಾರೆ.  ಈ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ 2 ವಾರಗಳಂದೀಚೆಗೆ ಕೋವಿಡ್-19 ಸೋಂಕು ಹರಡುವಿಕೆಯ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ಮರಣ ಪ್ರಮಾಣವು ಕೂಡಾ ಹೆಚ್ಚಳವಾಗಿರುತ್ತದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಜ್ಞರೊಂದಿಗೆ ಈ ವಿಷಯದ ಕುರಿತು […]

ಅಪರಾಧ

ತಂಗಿ ರಕ್ಷಣೆಗೆ ಹೋದ ಅಣ್ಣ-ತಂಗಿ ನೀರು ಪಾಲು…!

ಬೆಳಗಾವಿ prajakiran.com : ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿ ಅಣ್ಣ-ತಂಗಿ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಅಥಣಿ ತಾಲೂಕಿನ ಗುಂಡೆವಾಡಿ ಗ್ರಾಮದ ಕೃಷಿ ಹೊಂಡದಲ್ಲಿ ಈ ರ್ದುಘಟನೆ ನಡೆದಿದೆ. ತಮ್ಮ ಜಮೀನಿನ ಕೆಲಸ ಕಾರ್ಯಗಳಿಗೆಅನುಕೂಲವಾಗಲೆಂದು ಹೊಲದಲ್ಲಿ ತೆಗೆಸಿದ್ದ ಆ ಕೃಷಿ ಹೊಂಡ ರೈತನಿಗೆ ವರವಾಗುವ ಬದಲಿಗೆ ಶಾಪವಾಗಿ ಪರಿಣಮಿಸಿದೆ.  ಆ ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿ 13 ವರ್ಷದ ಸನ್ಮತಿ ನ್ಯಾಮಣ್ಣ ಕುಪ್ಪವಾಡ ಹಾಗೂ 15 ವರ್ಷದ ಪಾರ್ಶ್ವನಾಥ  ನ್ಯಾಮಣ್ಣ ಕುಪವಾಡ ಸಾವನ್ನಪ್ಪಿದ್ದಾರೆ ಎಂದು […]