ಬೆಂಗಳೂರು prajakiran.com : ಹಾಸನ ಮೂಲದ ಕಿರುತೆರೆ ನಟಿ ಚಂದನಾಗೆ ವಂಚಿಸಿದ್ದ ಆರೋಪದ ಹಿನ್ನಲೆಯಲ್ಲಿ ಆರೋಪಿ ದಿನೇಶ್ ನನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರಿನ ಬೆರಣಗೊಡುವಿನಲ್ಲಿ ತಲೆಮರೆಸಿಕೊಂಡಿದ್ದ ದಿನೇಶ ನನ್ನು ಬೆಂಗಳೂರಿನ ಸದ್ದುಗುಂಟೆಪಾಳ್ಯದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಬೇಲೂರು ತಾಲೂಕಿನವಾಗಿನಕೆರೆ ಮೂಲದ ಇಂಜಿನಿಯರ್ ಆಗಿದ್ದ ಇತ ತನ್ನ ಸ್ನೇಹಿತನ ಮನೆಯಲ್ಲಿ ಅವಿತುಕೊಂಡಿದ್ದ ಬಗ್ಗೆ ಪೊಲೀಸರು ಸುಳಿವು ಅರಿತು ಬಂಧಿಸಿಕರೆತಂದಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮೇ 28ರಂದು ನಟಿ ಚಂದನಾ ವಿಷ ಸೇವಿಸಿ ಸೆಲ್ಫೀ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದರು. ಆಕೆಯ ಸಾವಿಗೆ ಬಾಯ್ ಫ್ರೇಂಡ್ ದಿನೇಶ್ ಕಾರಣ ಎಂದು ಕುಟುಂಬಸ್ಥರು ದೂರು ನೀಡಿದ್ದರು.
ನಟಿ ಚಂದನಾ ಹಾಗೂ ಖಾಸಗಿ ಕಂಪನಿ ನೌಕರ ದಿನೇಶ್ ಪರಸ್ಪರ ಕಳೆದ ಐದು ವರ್ಷಗಳಿಂದ ಪ್ರೀತಿಸಿ, ಇಬ್ಬರು ಜೊತೆಗೆ ಓಡಾಡಿದ್ದರು.
ಅಲ್ಲದೆ, ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ಆನಂತರ ಗರ್ಭಪಾತ ಕೂಡ ಮಾಡಿಸಿದ್ದ.ಅಲ್ಲದೆ, 5 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದ.
ಮದುವೆಗೆ ಕುಟುಂಬಸ್ಥರು ಒಪ್ಪಿಲ್ಲ ಎಂದು ಕಾಲಹರಣ ಮಾಡುತ್ತಿದ್ದ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.