ರಾಜ್ಯ

ಜಮೀರ್ ಗೆ ತಿರುಗೇಟು ನೀಡಿದ ಹೆಚ್.ಡಿ. ಕುಮಾರಸ್ವಾಮಿ

ನಾನೇ ಕರೆದುಕೊಂಡು ಹೋಗಿದ್ದೆ ಎಂದ ಜಮೀರ್ ಅಹ್ಮದ್ ಟಾಕ್ ವಾರ್

ಬೆಂಗಳೂರು prajakiran.com : ಯಾಕೆ ನಾನು ಕೋಲೋಂಬೋ ಹೋಗಬಾರದ್ರ, ಏನ್ ಬ್ಯಾನ್ ಇದೆಯಾ ನಾನು ಹೋಗಿಲ್ಲ ಅಂತ ಎಲ್ಲೂ ಹೇಳಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಜಮೀರ ಅಹ್ಮದ್ ಸಮರ್ಥಿಸಿಕೊಂಡಿದ್ದಾರೆ.

ನಾನು ಜೆಡಿಎಸ್ ನಲ್ಲಿ ಇದ್ದಾಗ  ಅಂದಿನ ದೋಸ್ತಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೊತೆಗೆ ಹೋಗಿದ್ದೇನೆ. ಹೋಗುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಡ್ರಗ್ಸ್ ಜಾಲದ ಕುರಿತು ಸಿಸಿಬಿಯಿಂದ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೂ ನನ್ನ ಶ್ರೀಲಂಕಾ ಪ್ರವಾಸಕ್ಕೂ ತಳಕು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

2014ರಲ್ಲಿ ಜೆಡಿಎಸ್ ಪಕ್ಷದ ಸಮಸ್ಯೆಗಳನ್ನು ಗುಪ್ತವಾಗಿ ಚರ್ಚಿಸಲು ಅಂತಿಮವಾಗಿ ಶ್ರೀಲಂಕಾ ಹೋಗಿದ್ದೇವೆ. ಗೋವಾ ಕ್ಕಿಂತ ಶ್ರೀಲಂಕಾ ಖರ್ಚು ಕಡಿಮೆ ಇದೆ. ಹೀಗಾಗಿ ನಮ್ಮ ಶಾಸಕರು, ಪಕ್ಷದ ಮುಖಂಡರ ಜೊತೆಗೆ ಹೋಗಿದ್ದೇನೆ ಎಂದು ಸಮರ್ಥಿಸಿಕೊಂಡರು.

ಶ್ರೀಲಂಕಾದಕೊಲಂಬೋಗೆಒಮ್ಮೆಪ್ರವಾಸಹೋಗಿದ್ದುನಿಜ. ಆದರೆ, ಕದ್ದುಮುಚ್ಚಿ ‘ಕೊಲಂಬೋಯಾತ್ರೆ’ ಮಾಡಿರಲಿಲ್ಲ. ಕೊಲಂಬೋಪ್ರಯಾಣಅದೇಮೊದಲುಮತ್ತುಕೊನೆ. ಇದರಲ್ಲಿಬಚ್ಚಿಡುವುದುಏನೇನೂಇಲ್ಲ. ಅವರುನಮ್ಮೊಂದಿಗೆಬಂದಿದ್ದರೆಹೊರತುನಾವುಅವರೊಂದಿಗೆಹೋಗಿರಲಿಲ್ಲಎಂದು ಜರಿದಿದ್ದಾರೆ.

ಆ ಮೂಲಕ ಡ್ರಗ್ಸ್ ತನಿಖೆ ದಾರಿ ತಪ್ಪಬಾರದು. ವಿಷಯಾಂತರ ಮಾಡಬೇಡಿ. ಡ್ರಗ್ಸ್ ತನಿಖೆ ವೇಳೆ ಹಳೆ ಸುದ್ದಿ ಈಗೇಕೆ ಜಮೀರ್ ಅಹ್ಮದ ಪ್ರಸ್ತಾಪ ಮಾಡಿದ್ದಾರೆ ಎಂದು ಕುಟುಕಿದರು.

ನನಗೆ ಏನೂ ಗೊತ್ತಾಗಲ್ವಾ, ನಾನು ಶ್ರೀಲಂಕಾಗೆ ಹೋಗೋಕೆ ಆಗಲ್ವಾ ತನಿಖೆಗೂ ಈ ಚರ್ಚೆಗೆ ಸಂಬಂಧವಿಲ್ಲ. ಡ್ರಗ್ಸ್ ಜಾಲದ ತಳಕು ನನ್ನ ಪ್ರವಾಸಕ್ಕೆ ಲಿಂಕ್ ಏನಿದೆ ಎಂದು ಖಾರವಾಗಿಯೇ ಹಳೆ ದೋಸ್ತಿ ವಿರುದ್ದ ಗುಡುಗಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *