ವಿಜಯಪುರ prajakiran.com : ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ ಭೀತಿ ಆವರಿಸಿದ್ದು, ಅಪಾರ ಪ್ರಮಾಣದ ಬೆಳೆಹಾನಿಗೀಡಾಗಿದೆ.
ಸಾತಿಹಾಳ ಗ್ರಾಮ ಜಲಾವೃತಗೊಂಡಿದ್ದು, ಹೊಳೆ ಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿದೆ.
ಅದೇ ರೀತಿ ತ್ರಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ, ದೇವರ ಹಿಪ್ಪರಗಿ, ತಾಳಿಕೋಟೆ ತಾಲೂಕಿನ ಹಲವು ಹಳ್ಳಿಗೆ ನೀರು ನುಗ್ಗಿದೆ.
ದೇವರಹಿಪ್ಪರಗಿ ಬ್ರಿಜ್ ಮೇಲೆ ನೀರು ಹರಿಯುತ್ತಿದ್ದು, ಜಿಲ್ಲೆಯ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ, ಮೆಕ್ಕೆಜೋಳ, ಹತ್ತಿ ಬೆಳೆಹಾನಿಯಾಗಿದೆ. ಮಳೆ ಆರ್ಭಟಕ್ಕೆ ಡೋಣಿ ನದಿ ಉಕ್ಕಿ ಹರಿಯುತ್ತಿದೆ.