ಅಂತಾರಾಷ್ಟ್ರೀಯ

ಪುಣೆಯಲ್ಲಿಯೂ ಧಾರಾಕಾರ ಮಳೆ : ಪುಣೆ – ಅಹ್ಮದನಗರ -ಶಿರಡಿ ಹೆದ್ದಾರಿ ಸಂಪೂರ್ಣ ಬಂದ್

ಪುಣೆ prajakiran.com : ಪುಣೆ ಮಹಾನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜನರು ತಲ್ಲಣಗೊಂಡು ಹೌಹಾರಿದ್ದಾರೆ.

ನಗರದಾದ್ಯಂತ ಒಂದೇ ಸವನೆ ಬಿಟ್ಟೂ ಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಪುಣೆಅಹ್ಮದನಗರಶಿರಡಿ ಹೆದ್ದಾರಿ ಸಂಪೂರ್ಣವಾಗಿ ಬಂದ ಆಗಿದೆ.

ಅ. 15ರ ಮಧ್ಯಾಹ್ನದವರೆಗೆ ನಗರದಲ್ಲಿ ಮತ್ತು ಹೆದ್ದಾರಿಯಲ್ಲಿ ಒಂದೇ ಸವನೇ ರಭಸದಿಂದ ಹರಿಯುತ್ತಿರುವ ಮಳೆಯ ನೀರು ಇಳಿಮುಖವಾದರೆ ಹೆದ್ದಾರಿ ಪುನರಾರಂಭವಾಗುವ ಲಕ್ಷಣಗಳಿವೆ.

 ಮಳೆಯಿಂದಾಗಿ ಇದುವರೆಗೆ ವಾಗೋಲಿ ನಗರ ಪ್ರದೇಶವೊಂದರಲ್ಲೇ ನಾಲ್ಕು ಮಧ್ಯಮ ವಯಸ್ಕರ ಜನ  ಸಾವಿಗೀಡಾಗಿದ್ದಾರೆ ಎಂಬ ವರದಿ ಜನರನ್ನು ಇನ್ನೂ ಖಿನ್ನತೆಗೆಯೆಡೆ ಸಾಗಿಸಿದೆ.

ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವ ಇದೆಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮಹಾನಗರದಲ್ಲಿ ವಿದ್ಯುತ್ ಸಂಪರ್ಕ ಕಡಿದು ನಗರವೇ ಕತ್ತಲಲ್ಲಿ ಮುಳುಗಿದೆ.

ಪುಣೆಪಿಂಪ್ರಿಚಿಂಚವಾಡ ಮಹಾನಗರ ಪಾಲಿಕೆ ಹಾಗೂ ಪೊಲೀಸ ಇಲಾಖೆ ಎಲ್ಲ  ಬಗೆಯ ಮುಂಜಾಗರೂಕತಾ ಕ್ರಮಗಳನ್ನು ಕೈಕೊಂಡಿದ್ದು ಜನರಿಗೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ.

ಅಲ್ಲಲ್ಲಿ ಜನಹಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದು ಜನರು ಅಗತ್ಯಾನುಸಾರ ಸಂಪರ್ಕಿಸಲು ಕೋರಲಾಗಿದೆಜನರ ಮಾತುಗಳ ಪ್ರಕಾರ ಇಂತಹ ಮಳೆ ಒಂದು ಶತಮಾನದಲ್ಲಿ ಹಿಂದೆಂದೂ  ಸುರಿದಿಲ್ಲ ಎಂಬುದು ಖಚಿತವಾಗಿದೆ

ವರದಿ  : ಡಾ. ರಾಜೇಂದ್ರ ಮಾಳವದೆ, ಪುಣೆ .

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *