ಪುಣೆ prajakiran.com : ಪುಣೆ ಮಹಾನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜನರು ತಲ್ಲಣಗೊಂಡು ಹೌಹಾರಿದ್ದಾರೆ.
ನಗರದಾದ್ಯಂತ ಒಂದೇ ಸವನೆ ಬಿಟ್ಟೂ ಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಪುಣೆ – ಅಹ್ಮದನಗರ –ಶಿರಡಿ ಹೆದ್ದಾರಿ ಸಂಪೂರ್ಣವಾಗಿ ಬಂದ ಆಗಿದೆ.
ಅ. 15ರ ಮಧ್ಯಾಹ್ನದವರೆಗೆ ನಗರದಲ್ಲಿ ಮತ್ತು ಹೆದ್ದಾರಿಯಲ್ಲಿ ಒಂದೇ ಸವನೇ ರಭಸದಿಂದ ಹರಿಯುತ್ತಿರುವ ಮಳೆಯ ನೀರು ಇಳಿಮುಖವಾದರೆ ಹೆದ್ದಾರಿ ಪುನರಾರಂಭವಾಗುವ ಲಕ್ಷಣಗಳಿವೆ.
ಮಳೆಯಿಂದಾಗಿ ಇದುವರೆಗೆ ವಾಗೋಲಿ ನಗರ ಪ್ರದೇಶವೊಂದರಲ್ಲೇ ನಾಲ್ಕು ಮಧ್ಯಮ ವಯಸ್ಕರ ಜನ ಸಾವಿಗೀಡಾಗಿದ್ದಾರೆ ಎಂಬ ವರದಿ ಜನರನ್ನು ಇನ್ನೂ ಖಿನ್ನತೆಗೆಯೆಡೆ ಸಾಗಿಸಿದೆ.
ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವ ಇದೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮಹಾನಗರದಲ್ಲಿ ವಿದ್ಯುತ್ ಸಂಪರ್ಕ ಕಡಿದು ನಗರವೇ ಕತ್ತಲಲ್ಲಿ ಮುಳುಗಿದೆ.
ಪುಣೆ –ಪಿಂಪ್ರಿ –ಚಿಂಚವಾಡ ಮಹಾನಗರ ಪಾಲಿಕೆ ಹಾಗೂ ಪೊಲೀಸ ಇಲಾಖೆ ಎಲ್ಲ ಬಗೆಯ ಮುಂಜಾಗರೂಕತಾ ಕ್ರಮಗಳನ್ನು ಕೈಕೊಂಡಿದ್ದು ಜನರಿಗೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ.
ಅಲ್ಲಲ್ಲಿ ಜನಹಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದು ಜನರು ಅಗತ್ಯಾನುಸಾರ ಸಂಪರ್ಕಿಸಲು ಕೋರಲಾಗಿದೆ. ಜನರ ಮಾತುಗಳ ಪ್ರಕಾರ ಇಂತಹ ಮಳೆ ಈ ಒಂದು ಶತಮಾನದಲ್ಲಿ ಹಿಂದೆಂದೂ ಸುರಿದಿಲ್ಲ ಎಂಬುದು ಖಚಿತವಾಗಿದೆ.
ವರದಿ : ಡಾ. ರಾಜೇಂದ್ರ ಮಾಳವದೆ, ಪುಣೆ .