ರಾಜ್ಯ

ಹಿರಿಯ ಕವಿ ಡಾ.‌ ವಿ.ಸಿ. ಐರಸಂಗ ಇನ್ನು ನೆನಪು ಮಾತ್ರ

ಧಾರವಾಡ prajakiran.com : ಹಿರಿಯ ಕವಿ ಡಾ‌ ವಿ ‌ಸಿ ಐರಸಂಗಅವರು ಶುಕ್ರವಾರ ಬೆಳಗಿನ ಜಾವ ತಮ್ಮ 91  ‌ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

ಅವರು ಕಳೆದ ಹಲವು ದಿನಗಳಿಂದಅನಾರೋಗ್ಯದಿಂದ ಬಳಲುತ್ತಿದ್ದರು. ರಕ್ತ ಹೀನತೆಯಿಂದ ಅವರು ಬಳಲುತ್ತಿದ್ದರು. ಹೀಗಾಗಿ ಅವರನ್ನು ಧಾರವಾಡದ ಜರ್ಮನ್ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದರು.

ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಡಾ. ವಿ ಸಿ ಐರಸಂಗ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಅವರು ಸೈಕಲ್ ಮೇಲೆಯೇ ಸಮ್ಮೇಳನಕ್ಕೆ ಬಂದಿದ್ದರು.

ತಮ್ಮ ಸರಳ ಜೀವನ ಶೈಲಿಯಿಂದಲೇ ಎಲ್ಲರ ಮನಸೊರೆಗೊಂಡಿದ್ದರು. ಡಾ. ವಿ ಸಿ ಐರಸಂಗ ಅವರು ಸಾವಿರಾರು ಕವನಗಳನ್ನು ಬರೆದಿದ್ದರು.

 ವಿ ಸಿ ವಿ ಸಿ ಐರಸಂಗ ಅವರು ಮಗ, ಮಗಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಶುಕ್ರವಾರ ನ.13ರಂದು ಬೆಳಿಗ್ಗೆ ೧೧.೩೦ ಕೈ ಧಾರವಾಡದ ಹೊಸ ಯಲ್ಲಾಪೂರ  ರುದ್ರ ಭೂಮಿ ಯಲ್ಲಿ ಜರುಗುವುದು.

ಮೃತ ರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದು:ಖ ಸಹಿಸುವ ಶಕ್ತಿ ಸಿಗಲಿ ಎಂದುಅನೇಕ ಸಾಹಿತಿಗಳು, ಗಣ್ಯರು ಕಂಬನಿ ಮಿಡಿದಿದ್ದಾರೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *