ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿಅವರ ಮನೆಗೆ ಗುರುವಾರ ಅಖಿಲ ಭಾರತ ಲಿಂಗಾಯತ ಸಮಾಜದ ಮಹಿಳಾ ವೇದಿಕೆ ವೀಣಾ ಕಾಶಪ್ಪನವರ ಸೇರಿದಂತೆ ಅನೇಕ ಮಹಿಳಾ ಮುಖಂಡರು ಭೇಟಿ ನೀಡಿ ಧೈರ್ಯ ತುಂಬಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಗಿದ ಕೇಸ್ ನ್ನು ಸಿಬಿಐ ತನಿಖೆಗೆ ನೀಡಿ ವಿನಯ ಕುಲಕರ್ಣಿಯವರನ್ನು ರಾಜಕೀಯವಾಗಿ ಹೆಣೆಯಲು ಯತ್ನಿಸಲಾಗಿದೆ.
ಲಿಂಗಾಯತ ಸಮಾಜದ ನಾಯಕ ವಿನಯ ಕುಲಕರ್ಣಿ ಬಂಧನದಿಂದ ನಾವು ದೃತಿಗೆಟ್ಟಿಲ್ಲ. ಅವರು ನ್ಯಾಯಾಲಯದ ಮೂಲಕ ಆರೋಪ ಮುಕ್ತರಾಗಿ ಹೊರ ಬರಲಿದ್ದಾರೆ.
ನಾವೇಲ್ಲರೂ ಅವರ ಜೊತೆಗೆ ಇರ್ತಿವಿ. ಅಂತಹವರು ನಮ್ಮ ಸಮಾಜಕ್ಕೆ ಬೇಕು. ಮುಂದಿನ ದಿನಗಳಲ್ಲಿ ಆರೋಪ ಮುಕ್ತರಾಗಿ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವರ ಕುಟುಂಬಕ್ಕೆ ಧೈರ್ಯತುಂಬಿದ್ದೇವೆ. ನಾವು ಅವರೊಂದಿಗೆ ಇದ್ದೇವೆ ಎಂದು ವೀಣಾ ಕಾಶಪ್ಪನವರ ಹೇಳಿದರು.