ಹಾವೇರಿ prajakiran.com : ಧಾರವಾಡದ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯಥಿ೯ಯಾಗಿ ನಾಮಪತ್ರ ಸಲ್ಲಿಸಿರುವ ರವಿ ಶಿವಪ್ಪ ಪಡಸಲಗಿ ಸೂಚಕರ ಸಹಿ ನಕಲು ಮಾಡಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಬೆಂಗಳೂರು ಮೂಲದ ರವಿ ಪಡಸಲಗಿ ಅನುಮತಿ ಪಡೆಯದೆ ಸೂಚಕರಾಗಿ ಸವಣೂರು ತಾಲೂಕಿನ 10 ಮತದಾರರ ಹೆಸರು ಮತ್ತು ಖೊಟ್ಟಿ ಸಹಿ ಬಳಿಸಿ ನಾಮಪತ್ರ ಸಲ್ಲಿಸಿದ್ದಾರೆ ಎಂಬಅನುಮಾನದ ಮೇಲೆ ಪರಿಶೀಲನೆ ನಡೆಸಿದಾಗ ಈ ಸಂಶಯ ದೃಢಪಟ್ಟಿದೆ.
ಈ ಹಿನ್ನಲೆಯಲ್ಲಿ 4 ಜನರನ್ನು ವಿಚಾರಣೆ ನಡೆಸಿದಾಗಅಭ್ಯರ್ಥಿಯ ಪರಿಚಯವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಅವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ರವಿ ಅವರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಸೋಮವಾರ ಅ. 5ರಂದು ನಾಮ ಪತ್ರ ಸಲ್ಲಿಸಿದ್ದರು. ಈ ವೇಳೆ ಅವರಿಗೆ ಸೂಚಕರಾಗಿ 10 ಜನರ ಸಹಿ ಮಾಡಿಸಲಾಗಿತ್ತು.
ಈ ಕುರಿತಂತೆ ಹಾವೇರಿ ಅಪರ ಜಿಲ್ಲಾಧಿಕಾರಿ ಎಸ್ ಯೋಗೇಶ್ವರ ಅವರು ಸವಣೂರು ಉಪವಿಭಾಗದ ಎಸಿ ಕಚೇರಿಯಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ, ಅಭ್ಯಥಿ೯ಯು ಸೂಚಕರು ಎಂದು ನಮೂದಿಸಿದ ಎಲ್ಲರ ಸಹಿ ನಕಲಿ ಎಂದು ತಿಳಿದು ಬಂದಿದೆ.
ಈ ಕುರಿತಂತೆ ದೂರು ದಾಖಲಿಸಲು ಸೂಚಕರು ಹಿಂಬರಹ ನೀಡಿದ್ದರಿಂದ ಅವರ ವಿರುದ್ದ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ಕೈ ಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ತಿಳಿಸಿದ್ದಾರೆ.