ಜಿಲ್ಲೆ

ಧಾರವಾಡದ ಹೆಸ್ಕಾಂನಿಂದ 8 ದಿನದೊಳಗೆ ವಿದ್ಯುತ್ ತಂತಿ, ಬಾಗಿದ ವಿದ್ಯುತ್ ಕಂಬಗಳ ಸ್ಥಳಾಂತರ

ಧಾರವಾಡ prajakiran.com : ವಿದ್ಯುತ್ ಆವಾಂತರದ ಬಗ್ಗೆಅಳಲು ತೋಡಿಕೊಂಡಿದ್ದ ಧಾರವಾಡದ ಜನತೆ ಮನವಿಗೆ 8 ದಿನದೊಳಗೆ ವಿದ್ಯುತ್ ತಂತಿ ಹಾಗೂ ಬಾಗಿದ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿ ಹೆಸ್ಕಾಂ ಅಧಿಕಾರಿಗಳು ಮೆಚ್ಚುಗೆ ಕೆಲಸಕ್ಕೆ ಪಾತ್ರವಾಗಿದ್ದಾರೆ

ಇದರಿಂದಾಗಿ ಧಾರವಾಡದ ಎತ್ತಿನಗುಡ್ಡ ರಸ್ತೆಯ ಹಾಶ್ಮೀನಗರದ ಮೊದಲ ಕ್ರಾಸ್  ನಿವಾಸಿಗಳ ವಿದ್ಯುತ್ ಸಮಸ್ಯೆಗೆ ಕೊನೆಗೂ  ಶಾಶ್ವತ ಪರಿಹಾರ ಸಿಕ್ಕಂತೆ ಆಗಿದೆ.

ಈ ಸಮಸ್ಯೆಗೆ ಎಕ್ಸಕೂಟಿವ್ ಇಂಜಿನಿಯರ್  ಕಳಕಪ್ಪ ಪಾಗಿ, ಎಇಇ ದೇವರಾಜ ಹೆಗಡೆ , ಸೆಕ್ಷನ್ ಆಫೀಸರ್ ಗೊವಿಂದ್ ನಾಯಕ್ ತೀವ್ರಗತಿಯಲ್ಲಿ ಸ್ಪಂದಿಸಿದ ಹಿನ್ನೆಲೆ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ

ಸೆಕ್ಷನ್ ಆಫೀಸರ್ ನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಇತರರು ಶೀಘ್ರಗತಿಯಲ್ಲಿ ಕೆಲಸ ಮಾಡಿ ತೋರಿಸುವ ಮೂಲಕ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ

ಸ್ಥಳೀಯರಾದ ಬಶೀರ ಕಿತ್ತೂರು,  ಮಾಬೂಲಿ ಹಾವೇರಿ ಪೇಟೆ ಸೇರಿದಂತೆ ಸ್ಥಳೀಯ ನಿವಾಸಿಗಳು ಹೆಸ್ಕಾಂ ಕೆಲಸಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಈ ಕುರಿತು ಪ್ರಜಾಕಿರಣ.ಕಾಮ್ ಧಾರವಾಡದಲ್ಲಿ ಅಂಗೈಯಲ್ಲಿ ಜೀವ ಹಿಡಿದು ಜೀವನ ನಡೆಸುತ್ತಿರುವ ನಿವಾಸಿಗಳು ಎಂಬ ಅಡಿ ಬರಹದಲ್ಲಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ ವರದಿ ಪ್ರಕಟಿಸಿತ್ತು.

ಅದಕ್ಕೆ ಕೊನೆಗೂ ಸ್ಪಂದಿಸಿದ ಹೆಸ್ಕಾಂ ಅಧಿಕಾರಿಗಳಿಗೆ ನಮ್ಮ ಪ್ರಜಾಕಿರಣ.ಕಾಮ್ ಕೂಡ ಶ್ಲಾಘನೆ ವ್ಯಕ್ತಪಡಿಸುತ್ತದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *