ಧಾರವಾಡ prajakiran.com : ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಹಾಡಹಗಲೇ ರೌಡಿಸಂ ಮಾಡಿದ್ದು ರೌಡಿಶೀಟರ್ ಅಲ್ಲಾವುದ್ದೀನ್ ಅಲಿಯಾಸ್ ಡಲ್ಯಾ ನದಾಫ್ ಹಾಗೂ ರೌಡಿಶೀಟರ್ ಫ್ರುಟ್ ಇರ್ಫಾನ್ ಅಲಿಯಾಸ್ ಸೈಯದ್ ಹಂಚಿನಾಳ ಪುತ್ರ ಅರ್ಬಾಜ್ ಹಂಚಿನಾಳ ಗ್ಯಾಂಗ್ ಎಂದು ಪೊಲೀಸರು ಪತ್ತೆ ಹಚ್ಚಿ ಎರಡು ಗ್ಯಾಂಗ್ ವಿರುದ್ದ ದೂರು ದಾಖಲಿಸಿದ್ದಾರೆ.
ದೂರು ದಾಖಲಾದವರ ವಿವರ :
ಅಲ್ಲಾವುದ್ದೀನ್ ಅಲಿಯಾಸ್ ಡಲ್ಯಾ ನದಾಫ್, ಅಮೀನ್ ಶಿಬಾರಗಟ್ಟಿ, ಅಜಯ ಕೊರವರ(ಮಾಕಡವಾಲೆ), ಫಯಾಜ್ ಮಕಾನದಾರ,ಮೈಲಾರಿ, ನಬೀ, ಮಾಬುಲಿ ಹಾಗೂ ಇತರರು ರೌಡಿಶೀಟರ್ ಫ್ರುಟ್ ಇರ್ಫಾನ್ ಅಲಿಯಾಸ್ ಸೈಯದ್ ಹಂಚಿನಾಳ ಪುತ್ರ ಅರ್ಬಾಜ್ ಹಂಚಿನಾಳ, ಶಹನವಾಜ್, ರಹೀಮ್ ರಜಬಲಿ, ವಾಸೀಮ್ ಮುನವಳ್ಳಿ,ಮನು ಅಲಿಯಾಸ್ ಮನ್ಮಥ್, ಸೋಹಿಲ್ ಹಾಲಬಾವಿ,ಫಹೀಮ್ ಹಾಗೂ ಇತರರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಗುಂಪುಗೂಡಿಕೊಂಡು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೈ ಕೈ ಮಿಲಾಯಿಸಿ, ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಮಾಡಿದ್ದಾರೆ.
ಅಲ್ಲದೆ, ಸಾರ್ವಜನಿಕರಿಗೆ ಭಯ ಹುಟ್ಟು ಹಾಕಿದ್ದಾರೆ ಎಂದು ಧಾರವಾಡ ಉಪನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಮುಖ ಆರೋಪಿಗಳಾದ ಡಲ್ಯಾ ಹಾಗೂ ಅರ್ಬಾಜ್ ಹಂಚಿನಾಳಗಾಗಿ ತಡಕಾಡುತ್ತಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ ಎರಡು ಗ್ಯಾಂಗ್ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಭದ್ರತೆಗಾಗಿ ನಿಯೋಜನೆಗೊಂಡ ಪೊಲೀಸರ ಎದುರೇ ಬಡಿದಾಡಿಕೊಂಡಿದ್ದರು.
ಜಿಲ್ಲಾಡಳಿತದ ಕೇಂದ್ರ ಕಚೇರಿ ಎದುರಿಗಿನ ಹಲ್ಲೆ ಇದಾಗಿದ್ದರಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ತೀವ್ರ ಇರಿಸುಮುರಿಸು ಆಗಿತ್ತು.
ಯುವಕರ ತಂಡ
ಬೆಲ್ಟ್ ನಿಂದ ಮನಬಂದಂತೆ ಥಳಿಸಿದ್ದ ವೀಡಿಯೋ ಕೂಡ ವೈರಲ್ ಆಗಿತ್ತು.
ಹೀಗಾಗಿ ಧಾರವಾಡದ ಉಪನಗರ ಠಾಣೆ ಪೊಲೀಸರ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.