ಸಿಐಡಿ ಡಿಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದ ತಂಡದಿಂದ ಮಹತ್ವದ ಬೇಟೆ
ಕಲಬುರಗಿ prajakiran. com :
ಪಿ ಎಸ್ ಐ ಅಕ್ರಮ ನೇಮಕಾತಿ ಕುರಿತು ಸಿಐಡಿ ತಂಡದ ತನಿಖೆ ದಿನದಂದ ದಿನಕ್ಕೆ ಬಗೆದಷ್ಟು ಆಳವಾಗುತ್ತಾ ಸಾಗಿದೆ.
ಕಲಬುರಗಿಯ ವಿದ್ಯಾನಗರದಲ್ಲಿರುವ
ಶರಣಬಸವೇಶ್ವರ ಕಾಲೇಜ್ ಆಫ್ ಸೈನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಬ್ಲೂ ಟೂತ್ ಬಳಸಿ ಅಕ್ರಮ ಎಸಗಿದ್ದರು.
ಇವರ ಬ್ಲೂಟೂತ್ ಮಾಹಿತಿಯನ್ನು ಪಡೆದ ಸಿಐಡಿ ತಂಡ ಇದರ ಜಾಡು ಹಿಡಿದು ತನಿಖೆ ಕೈಗೊಂಡಿತ್ತು.
ಬಂಧಿತ ಆರೋಪಿಗಳೆಲ್ಲರೂ ಹೈದ್ರಾಬಾದ್ ಕರ್ನಾಟಕ ರ್ಯಾಂಕ್ ವಿಜೇತರ ಪಟ್ಟಿಯಲ್ಲಿ ಒಬ್ಬರಿಗಿಂತ ಒಬ್ಬರು ಹೆಚ್ಚು ರ್ಯಾಂಕ್ ಪಡೆದಿದ್ದರು.
ಈ ಕುರಿತು ಐದು ಪ್ರತ್ಯೇಕ
ಎಫ್ ಆರ್ ಐ ದಾಖಲಿಸಿದ ಸಿಐಡಿ ಡಿಎಸ್ಪಿ
ಶಂಕರಗೌಡ ಪಾಟೀಲ ನೇತೃತ್ವದ ತಂಡದ ಕಾರ್ಯಾಚರಣೆ ಯಶಸ್ವಿಯಾಗಿದೆ.
ಬಂಧಿತರನ್ನು ಭಗವಂತರಾಜ್ ಜೋಗೂರ 1 ನೇ ರ್ಯಾಂಕ್ , ರವಿರಾಜ್ 3 ನೇ ರ್ಯಾಂಕ್ ,
ಸಿದ್ದುಗೌಡ ಶರಣಪ್ಪ ಪಾಟೀಲ,
22 ನೇ ರ್ಯಾಂಕ್ ಹೈಕ ಕೋಟಾ,
ಕಲ್ಲಪ್ಪ ಅಲ್ಲಾಪುರ 4ನೇ ರ್ಯಾಂಕ್,
ಶ್ರೀಶೈಲ್ 35 ನೇ ರ್ಯಾಂಕ್,
ಪೀರಪ್ಪ 8 ನೇ ರ್ಯಾಂಕ್
ವಿಜಯಕುಮಾರ 20 ನೇ ರ್ಯಾಂಕ್ ಸೋಮನಾಥ್ 18 ನೇ ರ್ಯಾಂಕ್ ಎಂದು ಗುರುತಿಸಲಾಗಿದೆ.
ರಾಜ್ಯದಲ್ಲಿ 54 ಸಾವಿರ ಅಭ್ಯರ್ಥಿಗಳು ಪಿಎಸ್ ಐ ಪರೀಕ್ಷೆ ಬರೆದಿದ್ದರು. ಪಿಎಸ್ಐ ಪರೀಕ್ಷೆ ಅಕ್ರಮ ನೇಮಕಾತಿಯಲ್ಲಿ ಬಹುಪಾಲು ಅಭ್ಯರ್ಥಿಗಳು ಸಿಐಡಿ ಬಲೆಗೆ ಬಿದ್ದಿರುವುದು ಆತಂಕದ ಸಂಗತಿಯಾಗಿದೆ