ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ.
ಅದಕ್ಕಾಗಿ ವಿಶೇಷ ಕ್ರಮದ ಅನಿವಾರ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಕೊರೋನಾ ಸೋಂಕು ಸಮುದಾಯಕ್ಕೂ ಹರಿಡಿದೆ. ಕೇಂದ್ರ ಸರ್ಕಾರ ಸಹ ಇದನ್ನು ಸ್ಪಷ್ಟಪಡಿಸಿದೆ ಎಂದರು.
ಐಸಿಯು ಬೆಡ್ ಕೊರತೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವ ಬೆಡ್ ಗಿಂತ ಹೆಚ್ಚು ರೋಗಿಗಳು ಬಂದರೆ ಐಸಿಯು ಬೆಡ್ ಸಮಸ್ಯೆ ಆಗವುದು ಸಹಜ.
ಈಗಾಗಲೇ ಝೋನಲ್ ವೈಸ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ.
ನಿತ್ಯ ಐಸಿಯು ಬೆಡ್ ಹೆಚ್ಚಳಕ್ಕೆ ಕ್ರಮ ವಹಿಸುತ್ತಿದ್ದೇವೆ ಎಂದರು.
ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.