*ನಕಲಿ ದಾಖಲೆ ಸೃಷ್ಟಿಸಿ 2 ಕೋಟಿ 75 ಲಕ್ಷ ವಂಚನೆ*
*ಧಾರವಾಡದ ವಿದ್ಯಾಗಿರಿಯಲ್ಲಿ ಮತ್ತೊಂದು ಪ್ರಕರಣ ದಾಖಲು*
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕೆ ಐ ಎ ಡಿಬಿಯ ಹಗರಣಗಳ ಸರಮಾಲೆ ಮುಂದುವರೆದಿದೆ.
ಈಗಾಗಲೇ 20 ಕೋಟಿ ಹಗರಣದ ತನಿಖೆ ಸಿಐಡಿಯಲ್ಲಿ ಚಾಲ್ತಿಯಲ್ಲಿರುವಾಗಲೇ
ಎರಡು ಪ್ರತ್ಯೇಕ ಪ್ರಕರಣಗಳು ಧಾರವಾಡದ ವಿದ್ಯಾಗಿರಿಯಲ್ಲಿ ದಾಖಲಾಗಿವೆ.
ಒಂದರಲ್ಲಿ ಭೂ ಮಾಲೀಕರ ಹೆಸರಿನಲ್ಲಿ ವಂಚನೆ ಮಾಡಿದ್ದರೆ, ಇನ್ನೊಂದರಲ್ಲಿ ಕೆ ಐ ಎ ಡಿಬಿಯ ಅಧಿಕಾರಿಗಳು ಶಾಮೀಲಾಗಿ ರೈತ ಕರೆಪ್ಪ ಪೂಜಾರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಇದರಲ್ಲಿ ಎ ಒನ್ ಆಗಿ ಕೆ ಎಲ್ ಆರ್ ಡಿವಿಸನ್ ನವೀನಕುಮಾರ್ ತಳವಾರ, ಎ ಟು ಉಪತಹಸೀಲ್ದಾರ್ ಪ್ರವೀಣ ಪೂಜಾರ,ಎ ತ್ರಿ ವಿ.ಡಿ.ಸಜ್ಜನ, ಶಂಕರ ತಳವಾರ, ಮಹಾದೇವಪ್ಪ ಶಿಂಪಿ
ಹೇಮಚಂದ್ರ ಚಿಂತಾಮಣಿ,ಮುದ್ದಿ ವಿರುದ್ಧ ದೂರು ದಾಖಲು ಆಗಿದೆ.
ಅದೇ ರೀತಿ ಕೆ ಐ ಎ ಡಿ ಎಜೆಂಟ್ ಗಳಾದ ಮೆಹಬೂಬ್ ಅಶ್ಫಕ್ ದುಂಡಿಸಿ, ರವಿ ಕುರಬೆಟ್ಟ, ರೈತನ ಸಂಬಂಧಿಗಳಾದ
ತುಕಾರಾಂ ಬೀರಪ್ಪ ಪೂಜಾರ, ಕರಿಯಪ್ಪ ಬೀಮಪ್ಪ ಪೂಜಾರ, ರಾಮಪ್ಪ ಬೀಮಪ್ಪ ಪೂಜಾರ, ಫಕೀರಪ್ಪ ಬೀಮಪ್ಪ ಪೂಜಾರ ವಿರುದ್ಧ ದೂರು ದಾಖಲಾಗಿದೆ.
ಈಗಾಗಲೇ 20 ಕೋಟಿ ಹಗರಣದಲ್ಲಿ
ಕೆ ಐ ಎ ಡಿಬಿಯ ನಿವೃತ್ತ
ವಿ.ಡಿ. ಸಜ್ಜನ, ಮ್ಯಾನೇಜರ್ ಶಂಕರ ತಳವಾರ, ಎಜೆಂಟ್ ಮೆಹಬೂಬ್ ಅಲಿಯಾಸ್ ಅಶ್ಪಕ್ ದುಂಡಸಿ ಸಿಐಡಿ ಬಂಧಿಸಿದ್ದು ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಈ ಹದಿಮೂರು ಜನರ ಪೈಕಿ ಮೂವರನ್ನು ಬಿಟ್ಟು ಇನ್ನುಳಿದವರ ಬಂಧನ ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.
ಒಟ್ಟಾರೆ ಕೆ ಐ ಎ ಡಿಬಿಯಲ್ಲಿ ಬಗೆದಷ್ಟು ಆಳ ಹಗರಣಗಳು ಅಡಗಿರುವುದು ಸತ್ಯ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.