ರಾಜ್ಯ

ಧಾರವಾಡ : ನಕಲಿ ದಾಖಲೆ ಸೃಷ್ಟಿಸಿ 2 ಕೋಟಿ 75 ಲಕ್ಷ ವಂಚನೆ*

*ನಕಲಿ ದಾಖಲೆ ಸೃಷ್ಟಿಸಿ 2 ಕೋಟಿ 75 ಲಕ್ಷ ವಂಚನೆ*

*ಧಾರವಾಡದ ವಿದ್ಯಾಗಿರಿಯಲ್ಲಿ ಮತ್ತೊಂದು ಪ್ರಕರಣ ದಾಖಲು*

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕೆ ಐ ಎ ಡಿಬಿಯ ಹಗರಣಗಳ ಸರಮಾಲೆ ಮುಂದುವರೆದಿದೆ.

ಈಗಾಗಲೇ 20 ಕೋಟಿ ಹಗರಣದ ತನಿಖೆ ಸಿಐಡಿಯಲ್ಲಿ ಚಾಲ್ತಿಯಲ್ಲಿರುವಾಗಲೇ
ಎರಡು ಪ್ರತ್ಯೇಕ ಪ್ರಕರಣಗಳು ಧಾರವಾಡದ ವಿದ್ಯಾಗಿರಿಯಲ್ಲಿ ದಾಖಲಾಗಿವೆ.

ಒಂದರಲ್ಲಿ ಭೂ ಮಾಲೀಕರ ಹೆಸರಿನಲ್ಲಿ ವಂಚನೆ ಮಾಡಿದ್ದರೆ, ಇನ್ನೊಂದರಲ್ಲಿ ಕೆ ಐ ಎ ಡಿಬಿಯ ಅಧಿಕಾರಿಗಳು ಶಾಮೀಲಾಗಿ ರೈತ ಕರೆಪ್ಪ ಪೂಜಾರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆ‌ ಎಂದು ಪ್ರಕರಣ ದಾಖಲಾಗಿದೆ.

ಇದರಲ್ಲಿ ಎ ಒನ್ ಆಗಿ ಕೆ ಎಲ್ ಆರ್ ಡಿವಿಸನ್ ನವೀನಕುಮಾರ್ ತಳವಾರ, ಎ ಟು ಉಪತಹಸೀಲ್ದಾರ್ ಪ್ರವೀಣ ಪೂಜಾರ,ಎ ತ್ರಿ ವಿ.ಡಿ.ಸಜ್ಜನ, ಶಂಕರ ತಳವಾರ, ಮಹಾದೇವಪ್ಪ ಶಿಂಪಿ
ಹೇಮಚಂದ್ರ ಚಿಂತಾಮಣಿ,ಮುದ್ದಿ ವಿರುದ್ಧ ದೂರು ದಾಖಲು ಆಗಿದೆ.

ಅದೇ ರೀತಿ ಕೆ ಐ ಎ ಡಿ ಎಜೆಂಟ್ ಗಳಾದ ಮೆಹಬೂಬ್ ಅಶ್ಫಕ್ ದುಂಡಿಸಿ, ರವಿ ಕುರಬೆಟ್ಟ, ರೈತನ ಸಂಬಂಧಿಗಳಾದ
ತುಕಾರಾಂ ಬೀರಪ್ಪ ಪೂಜಾರ, ಕರಿಯಪ್ಪ ಬೀಮಪ್ಪ ಪೂಜಾರ, ರಾಮಪ್ಪ ಬೀಮಪ್ಪ ಪೂಜಾರ, ಫಕೀರಪ್ಪ ಬೀಮಪ್ಪ ಪೂಜಾರ ವಿರುದ್ಧ ದೂರು ದಾಖಲಾಗಿದೆ‌.

ಈಗಾಗಲೇ 20 ಕೋಟಿ ಹಗರಣದಲ್ಲಿ
ಕೆ ಐ ಎ ಡಿಬಿಯ ನಿವೃತ್ತ
ವಿ.ಡಿ. ಸಜ್ಜ‌ನ, ಮ್ಯಾನೇಜರ್ ಶಂಕರ ತಳವಾರ, ಎಜೆಂಟ್ ಮೆಹಬೂಬ್ ಅಲಿಯಾಸ್ ಅಶ್ಪಕ್ ದುಂಡಸಿ ಸಿಐಡಿ ಬಂಧಿಸಿದ್ದು ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಈ ಹದಿಮೂರು ಜನರ ಪೈಕಿ ಮೂವರನ್ನು ಬಿಟ್ಟು ಇನ್ನುಳಿದವರ ಬಂಧನ ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.

ಒಟ್ಟಾರೆ ಕೆ ಐ ಎ ಡಿಬಿಯಲ್ಲಿ ಬಗೆದಷ್ಟು ಆಳ ಹಗರಣಗಳು ಅಡಗಿರುವುದು ಸತ್ಯ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *