ಧಾರವಾಡ prajakiran.com : ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕರ್ತವ್ಯಲೋಪ ಮಾಡಿದ ಮೂವರನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ
ಸಹಾಯಕ ಚುನಾವಣಾಧಿಕಾರಿಗಳು
ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು ಆಗಿರುವ
ನಿತೇಶ್ ಕೆ . ಪಾಟೀಲ ಆದೇಶ ಹೊರಡಿಸಿದ್ದಾರೆ.
ವಿ. ಎಂ ಸಾಳುಂಕೆ , ಶಿರಸ್ತೇದಾರರು , ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ , ಧಾರವಾಡ, ಜಿ ಬಿ ಚಂದನಕರ , ದ್ವಿ.ದ.ಸ. ತಹಶೀಲದಾರ ಕಚೇರಿ , ಧಾರವಾಡ ಹಾಗೂ ಅಡಿವೇಶ ಪರ್ವತಿ , ದ್ವಿ.ದ.ಸ. ತಹಶೀಲದಾರ ಕಚೇರಿ , ಧಾರವಾಡ ಅಮಾನತು ಗೊಂಡವರು.
ಇವರು
ಮತಗಟ್ಟೆ ಸಿಬ್ಬಂದಿಗಳಿಗೆ ಪೂರೈಸಿದ ಚುನಾವಣಾ ಸಾಮಾಗ್ರಿಗಳ ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸದೆ ಚುನಾವಣಾ ಕಾರ್ಯದಲ್ಲಿ ನಿರ್ಲಕ್ಷವಹಿಸಿ ಕರ್ತವ್ಯಲೋಪ ಮಾಡಿ , ಚುನಾವಣೆ ಕಾರ್ಯಕ್ಕೆ ತೊಂದರೆಯುಂಟು ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಹೀಗಾಗಿ ಪ್ರಜಾ ಪ್ರಾತಿನಿಧ್ಯ ಕಾಯ್ದೆ , 1951 ರ ಕಲಂ 134 ಉಲ್ಲಂಘನೆ ಮಾಡಿದ್ದರಿಂದ ಈ ಮೇಲೆ ಸೂಚಿಸಿದ ಸಿಬ್ಬಂದಿಗಳನ್ನು ಪ್ರಜಾ ಪ್ರಾತಿನಿಧ್ಯ ಕಾಯ್ದೆ , 1951 ರ ಕಲಂ 28 ( ಎ ) ರಡಿ ಪ್ರದತ್ತವಾದ ಅಧಿಕಾರದಂತೆ , ಹಾಗೂ ಕರ್ನಾಟಕ ನಾಗರೀಕ ಸೇವಾ ( ವರ್ಗಿಕರಣ , ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಾವಳಿಗಳು , 1957 ರ . ನಿಯಮ 19 ( 1 ) ( ಎ ) ನೇದ್ದರ ಪ್ರಕಾರ ಇಲಾಖಾ ವಿಚಾರಣೆ ಬಾಕಿ ಇರಿಸಿ , ಸರಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿದೆ .
ಸದರ ನೌಕರರು ಅಮಾನತು ಅವಧಿಯಲ್ಲಿ ತಮ್ಮ ಕಾರ್ಯಾಲಯದ ಮುಖ್ಯಸ್ಥರ ಪಡೆಯದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಸೂಚಿಸಲಾಗಿದೆ
ಸದರ ನೌಕರರು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು , 1958 ರ ನಿಯಮ 98 ರ ಪ್ರಕಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ
ಸಹಾಯಕ ಚುನಾವಣಾಧಿಕಾರಿಗಳು
ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು ಆಗಿರುವ
ನಿತೇಶ್ ಕೆ . ಪಾಟೀಲ ತಿಳಿಸಿದ್ದಾರೆ.