ಹುಬ್ಬಳ್ಳಿ prajakiran.com : ಕರ್ನಾಟಕ ಸರ್ಕಾರವು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಗ್ರಾಮೀಣ ಶಿಕ್ಷಕರ ಸಂಘಧ ಬೇಡಿಕಗೆ ತತ್ ಕ್ಷಣ ಸ್ಪಂದಿಸಿ, ಶಿಕ್ಷಕರ ವರ್ಗಾವಣೆಗೆ ಅಂತಿಮ ನಿಯಮಾವಳಿ ಪ್ರಕಟಿಸಿರುವುದನ್ನು ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸ್ವಾಗತಿಸಿದ್ದಾರೆ.
ಆದರೆ ಕರ್ನಾಟಕ ರಾಜ್ಯದ ಶಿಕ್ಷಕರ ಸಂಘಟನೆಗಳು ಹಾಗೂ ಸಾರ್ವಜನಿಕರು, ಶಿಕ್ಷಕರು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸದೆ ಅಂತಿಮ ನಿಯಮಾವಳಿಗಳನ್ನು ರೂಪಿಸಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ನೋವು, ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸಹಸ್ರಾರು ವರ್ಗಾವಣೆ ಅಪೇಕ್ಷಿತರ ಕನಸು ನುಚ್ಚು ನೂರಾಗಿದೆ. ಆದಾಗ್ಯೂ ಯಾರೂ ಎದೆಗುಂದದೆ ಆತಂಕವಿಲ್ಲದೆ ಕಾರ್ಯ ನಿರ್ವಹಿಸಿ ಮುಂಬರುವ ದಿನಗಳು ಸಂಪೂರ್ಣ ಶಿಕ್ಷಕರ ಪರ ಹೊರ ಹೊಮ್ಮಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ದಿಸೆಯಲ್ಲಿ ಗ್ರಾಮೀಣ ಶಿಕ್ಷಕರ ಸಂಘವು ಸದಾ ಕಾಲ ಶಿಕ್ಷಕರೊಂದಿಗೆ ಇರಲಿದೆ. ಯಾವುದೇ ಹೋರಾಟಕೂ ಮತ್ತು ತ್ಯಾಗಕ್ಕೂ ಸದಾ ಸಿದ್ದವಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ . ಸಿ.ಉಪ್ಪಿನ.ಮಹಾ ಪೋಷಕರಾದ ಪವಾಡೆಪ್ಪ.ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ.ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ ಉಪಾಧ್ಯಕ್ಷರಾದ ಈರಣ್ಣ ಸೊರಟೂರ, ಧರ್ಮಣ್ಣ ಭಜಂತ್ರಿ, ಗೋವಿಂದ ಜುಜಾರೆ ತಿಳಿಸಿದ್ದಾರೆ.