ರಾಜ್ಯ

ರಾಜ್ಯದ ಶಾಲಾ ಕಾಲೇಜುಗಳ ದಸರಾ ರಜೆ ರದ್ದುಗೊಳಿಸಿರುವ ಆದೇಶ ಪುನರ್ ಪರಿಶೀಲಿಸುವಂತೆ ಒತ್ತಾಯ

ಹುಬ್ಬಳ್ಳಿ prajakiran.com : ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು  ಅ.1 ರಂದು 2020-21 ನೇ ಸಾಲಿನ ದಸರಾ ರಜೆ ರದ್ದುಗೊಳಿಸಿ  ಆದೇಶ ಮಾಡಿ ವಿದ್ಯಾಗಮ ಕಾರ್ಯಕ್ರಮ ಮುಂದುವರೆಸುವಂತೆ ಆದೇಶಿಸಿದ್ದಾರೆ.

 ಆದರೆ ಆದೇಶವು ಕೆ ಸಿ ಎಸ್ ಆರ್ ನಿಯಮಾವಳಿಗಳಿಗೆತದ್ವಿರುದ್ದವಾಗಿದೆ ಶಿಕ್ಷಕರು ರಜೆ ಸಹಿತ ನೌಕರರ ವೃಂದದಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರಿಗೆ ತೊಂದರೆಯಾಗಲಿದೆ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ  ಹುಬ್ಬಳ್ಳಿಆಪಾದಿಸಿದೆ.

 ರಾಜ್ಯದಲ್ಲಿ  ಕೋವಿಡ್ 19 ಸಾಂಕ್ರಾಮಿಕ ರೋಗದ ವ್ಯಾಪಕ ಹರುಡುತ್ತಿರುವ ಸಂದರ್ಭದಲ್ಲಿ   ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆ ನೀಡಿದ್ದರು.

ಸರ್ಕಾರದ ಆದೇಶದ ಪ್ರಕಾರ ಎಲ್ಲ ಶಿಕ್ಷಕರು ಜೂನ 5 ರಿಂದ ನಿರಂತರ ಶಾಲೆಗಳಿಗೆ ಹಾಜರಾಗಿ ಮಕ್ಕಳ ಮನೆಗೆ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳ ನಿರಂತರತೆ ಕಾಪಾಡುವ ನಿಟ್ಟಿನಲ್ಲಿ ವಿದ್ಯಾಗಮ ಕಾರ್ಯಕ್ರಮದ ಅನುಷ್ಠಾನ ಮಾಡುತ್ತಾ ಬಂದಿದ್ದಾರೆ.

ಇದಕ್ಕೂ ಮೊದಲುಕೋವಿಡ್ ವಾರಿಯರ್ಸ್ ಆಗಿ ಬೇಸಿಗೆ ರಜೆಯಲ್ಲಿ ಕೆಲಸನಿರ್ವಹಿಸಿದ್ದಾರೆ. ಈಗ ದಸರಾ ರಜೆಯಲ್ಲಿಯೂ ಇದನ್ನೆಮುಂದುವರೆಸಿದರೆಕಾನೂನಿನ ಪ್ರಕಾರ ಹಾಗೂ ಶಿಕ್ಷಕರು ಹಾಗೂವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತೊಂದರೆಯಾಗುತ್ತದೆ.

ನಾಡ ಹಬ್ಬದ ಔಚಿತ್ಯ ಹಾಗೂಪ್ರಾಮುಖ್ಯತೆಮಕ್ಕಳು ಅರಿಯಲಿ ಎಂಬ ಮೂಲ ಉದ್ದೇಶದ ಮೇರೆಗೆ ನೀಡಲಾಗುತ್ತಿದ್ದ ದಸರಾ ರಜೆ ರದ್ದುಗೊಳಿಸಿಆದೇಶ ಮಾಡಿರುವುದು ಅತ್ಯಂತ ಖಂಡನಾರ್ಹಬೆಳವಣಿಗೆಆಗಿದೆ ಎಂದು ಬೇಸರ ಹೊರಹಾಕಿದ್ದಾರೆ.

ಆದ್ದರಿಂದ ಆದೇಶವನ್ಪು ಪುನರ್ಪರಿಶೀಲಿಸುವಂತೆ ಹಾಗೂ ಹಿಂದಿನಂತೆಯೇದಸರಾ ರಜೆಮಂಜೂರು ಮಾಡುವ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *