ವಿದ್ಯಾನಗರಿ ಧಾರವಾಡದ ಜನತೆ ಕಂಗಾಲು
ಧಾರವಾಡ prajakiran.com : ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಗಸ್ಟ್ 06ರಂದು ಧಾರವಾಡ ಬಂದ್ ಕರೆ ನೀಡಲಾಗಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ಈ ಪೋಸ್ಟ್ ಯಾರು ಮಾಡಿದ್ದಾರೆ ಎಂಬುದು ಯಾರಿಗೂ ಮಾಹಿತಿ ಇಲ್ಲ.
ಇದರಿಂದಾಗಿ ವಿದ್ಯಾನಗರಿ ಜನತೆ ಕಂಗಾಲು ಆಗಿದ್ದಾರೆ.
ಅನೇಕರು ಪ್ರಜಾಕಿರಣ.ಕಾಮ್ ಗೆ ಕರೆ ಮಾಡಿ ನಾಳೆ ಧಾರವಾಡ ಬಂದ್ ಇದೆಯಾ ಎಂದು ಕೇಳುತ್ತಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ
ಶಾಸಕ ಅರವಿಂದ ಬೆಲ್ಲದ
ಸೋಷಿಯಲ್ ಮೀಡಿಯಾದಲ್ಲಿ ನಾಳೆ ಆ. 6, 2021ರ ಶುಕ್ರವಾರ ಯಾವುದೇ ರೀತಿಯಲ್ಲಿ ಧಾರವಾಡದ ಬಂದ್ ಆಗಲಿ ಪ್ರತಿಭಟನೆಯಾಗಲಿ ಇರುವದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ನಡೆದ ಹಲವಾರು ಫಟನೆಗಳ ಬಗ್ಗೆ ತಮ್ಮಲ್ಲರಿಗೆ ಗೊತ್ತು.
ಅದರಲ್ಲಿ ಧಾರವಾಡದ 74ರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ, ಜನ ಸಾಮಾನ್ಯರಿಗೆ ಆಗಿರುವ ಅಸಮಾಧಾನ,ನಿಮಗೆ ತಿಳಿದಿರುವ ವಿಷಯವಾಗಿದೆ.
ಆದಾಗ್ಯೂ ಯಾವುದೇ ಪ್ರತಿಭಟನೆ, ಬಂದ್ ಹಾಗೂ ಪಕ್ಷದ ಹಿರಿಯರು, ಮುತ್ಸದ್ಧಿ ರಾಜಕೀಯ ನಾಯಕರಾದ ಜಗದೀಶ್ ಶೆಟ್ಟರ್ ಅವರ ಬಗ್ಗೆ ಮತ್ತು ಕೇಂದ್ರದ ಪ್ರಭಾವಿ ಮಂತ್ರಿಗಳಾದ ನಮ್ಮ ಧಾರವಾಡದ ಸಂಸದರಾದ ಪ್ರಹ್ಲಾದ್ ಜೋಷಿಯವರ ವಿರುದ್ಧ ಹಾಗೂ ಪಕ್ಷದ ಅತ್ಯಂತ ಹಿರಿಯರು, ಮತ್ತು ಈ ರಾಜ್ಯದ ಮಾಜಿ ಮುಖ್ಯಮಂತ್ರಿ ಗಳಾದ ಯಡಿಯೂರಪ್ಪನವರ ಕುರಿತು
ಯಾವುದೇ ಅಸಂಬದ್ಧ ಹೇಳಿಕೆ ನೀಡುವದು, ಬಂದ್, ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ.