ಧಾರವಾಡ prajakiran.com : ಮನೆಯ ಹಿತ್ತಲದಲ್ಲಿ ಬೆಳೆದಿದ್ದ ಗಾಂಜಾ ಪತ್ತೆ ಮಾಡಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಧಾರವಾಡದ ಮಹಿಳಾ ಪಿಎಸ್ಐ ಯಶಸ್ವಿಯಾಗಿದ್ದಾರೆ. ಧಾರವಾಡ ತಾಲೂಕಿನ ಹಿರೇಮಲ್ಲಿಗವಾಡ ಗ್ರಾಮದ ರಾಮನಗೌಡ ಕಲ್ಲನಗೌಡ ಪಾಟೀಲ ತನ್ನ ಹಿತ್ತಲಿನಲ್ಲೇ ಗಾಂಜಾವನ್ನ ಬೆಳೆದಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಧಾರವಾಡ ಗ್ರಾಮೀಣ ಠಾಣೆ ಪಿಎಸೈ ಸುಮಾ ಗೋರಬಾಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಕಲ್ಲನಗೌಡ ಕಡೆಯಿಂದ 2ಕೆಜಿ 650 ಗ್ರಾಂ ಹಸಿ ಗಾಂಜಾವನ್ನ ವಶಕ್ಕೆ ಪಡೆದುಕೊಂಡು […]
Tag: ganja
ಧಾರವಾಡದಲ್ಲಿ ವಜಾಗೊಂಡ ಪೊಲೀಸ್ ಕಾನ್ಸಟೇಬಲ್ ಮನೆಯಲ್ಲಿ ಗಾಂಜಾ ಪತ್ತೆ…!
ಧಾರವಾಡ prajakiran.com : ಸೇವೆಯಿಂದ ವಜಾಗೊಂಡಿದ್ದ ಪೊಲೀಸ್ ಕಾನ್ಸಟೇಬಲ್ ಮನೆಯಲ್ಲಿ ಗಾಂಜಾ ಪತ್ತೆಯಾದ ಘಟನೆ ಧಾರವಾಡದಲ್ಲಿ ಸೋಮವಾರ ಸಂಜೆ ನಡೆದಿದೆ. ಪೊಲೀಸ್ ಆಯುಕ್ತ ಆರ್. ದಿಲೀಪ, ಧಾರವಾಡ ಎಸಿಪಿ ಜಿ. ಅನುಷಾ ಅವರ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ ಠಾಣೆ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವದ ಪೊಲೀಸರ ಕಾರ್ಯಾಚರಣೆಯಿಂದಾಗಿ ಈ ದುಷ್ಕೃತ್ಯ ಬಯಲಾಗಿದೆ. ಮನೆಯಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟುಕೊಂಡಿದ್ದ ವಜಾಗೊಂಡ ಪೊಲೀಸ್ ಕಾನ್ಸಟೇಬಲ್ ಸಂಜು ಪಾಟೀಲ್ (30) ಬಂಧಿತ ಆರೋಪಿಯಾಗಿದ್ದಾನೆ. ಈತ ಬೆಂಗಳೂರಿನ ಠಾಣೆಯೊಂದರಲ್ಲಿ ಕಾನ್ಸಟೇಬಲ್ ಆಗಿದ್ದ ಸಂಜು, […]
ಗದಗನಲ್ಲಿ ಮುಂದುವರೆದ ಗಾಂಜಾ ಘಾಟು : ಅಕ್ರಮವಾಗಿ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ
ಗದಗ prajakiran.com : ತಮ್ಮ ಹೊಲದಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಒಣಗಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಗದಗನಲ್ಲಿ ನಡೆದಿದೆ. ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯ ಡೋಣಿ ಗ್ರಾಮದ ಆರೋಪಿ ಪ್ರವೀಣಗೌಡ್ರ ತಂದೆ ಭರಮಗೌಡ್ರ ಜಯನಗೌಡ್ರ ಮನೆಯಲ್ಲಿ ಈ ಗಾಂಜಾ ಪತ್ತೆಯಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಎಸ್.ಎಂ. ಬೆಂಕಿ ನೇತೃತ್ವದ ಮುಂಡರಗಿ ಠಾಣೆಯ ತಂಡ ದಾಳಿ ಮಾಡಿ ಆರೋಪಿ ಪ್ರವೀಣಗೌಡ್ರ ತಂದೆ ಭರಮಗೌಡ್ರ ಜಯನಗೌಡ್ರ ಬಂಧಿಸಿದ್ದಾರೆ. ಬಂಧಿತನ ಬಳಿ ಅಂದಾಜು ಕಿಮ್ಮತ್ತ […]
ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗಳ ಬಂಧನ
ಲಿಂಗಸುಗೂರು : ಅಕ್ರಮವಾಗಿ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಜಲೇರದೊಡ್ಡಿಯ ಪರಸಪ್ಪ ಗುಜ್ಜಲ ಹಾಗೂ ಅಮರೇಶ ಗುಜ್ಜಲ ಬಂಧಿತ ಆರೋಪಿಗಳು. ಇವರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು, ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ನೇತೃತ್ವದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್ಐ ಮುದ್ದುರಂಗಸ್ವಾಮಿ ದಾಳಿ ನಡೆಸಿ 16 ಸಾವಿರ ಮೌಲ್ಯದ 9 ಕೆಜಿ ಗಾಂಜಾ […]
ಗಜೇಂದ್ರಗಡದಲ್ಲೂ ಅಕ್ರಮ ಗಾಂಜಾ ಘಾಟು : ಐವರ ಬಂಧನ
ಗಜೇಂದ್ರಗಡ (ಗದಗ) prajakiran.com : ಅಕ್ರಮ ಗಾಂಜಾ ಮಾರಾಟ ಮತ್ತು ಉತ್ಪಾದನೆ ಮಾಡುತ್ತಿದ್ದ ಐವರನ್ನು ಬಂಧಿಸಿದ ಘಟನೆ ಪಟ್ಟಣದ ಕಡ್ಡಿಯವರ ಪ್ಲಾಟ್ ನಲ್ಲಿ ಶುಕ್ರವಾರ ನಡೆದಿದೆ. ಪಟ್ಟಣದ ನಿವಾಸಿಗಳಾದ ಈರಪ್ಪ ಯಮನಪ್ಪ ರಾಠೋಡ, ವಾಸೀಮ ಅಮೀನಸಾಬ ಬಂಗಾರಗುಂಡಿ, ವೀರೇಶ ಪ್ರಭಾಕರ ಪುಡೂರ, ವಿರೇಶ ಗೋವಿಂದಪ್ಪ ದ್ಯಾವನಕೊಂಡಿ ಹಾಗೂ ಗದಗ ನಗರದ ನಿವಾಸಿ ಶಿವಕುಮಾರ ಕಾಶಪ್ಪ ಬೆಡಗೇರಿ ಬಂಧಿತ ಆರೋಪಿಗಳು. ಈರಪ್ಪ ರಾಠೋಡ ಎಂಬುವರು ತಮ್ಮ ಮನೆಯಲ್ಲಿ ಮಾರಾಟ ಮತ್ತು ಗಾಂಜಾ ಬೆಳೆಯುತ್ತಿದ್ದರು ಎನ್ನುವ ಖಚಿತ ಮಾಹಿತಿ ಮೇರೆಗೆ […]
ಧಾರವಾಡದಲ್ಲಿ ಗಾಂಜಾ ಜಾಲ ಭೇದಿಸಿದ ಪೊಲೀಸರು
ಆರು ಆರೋಪಿಗಳು ಅಂದರ್ ಧಾರವಾಡ prajakiran.com : ಗಾಂಜಾ ಮಾರಾಟ ಮಾಡುತ್ತಿದ್ದ ೬ ಜನ ಆರೋಪಿಗಳನ್ನು ಧಾರವಾಡ ಶಹರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಕೃಷ್ಣಕಾಂತ ತಿಳಿಸಿದರು. ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಪಿಗಳು ಶಹರದ ನುಚ್ಚಂಬ್ಲಿ ಬಾವಿ ಹತ್ತಿರ ಕಾರು ಮತ್ತು ಬೈಕ್ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಮದಾರಮಡ್ಡಿ ಜೈಭೀಮನಗರದ ಪೃಥ್ವಿ ಗಿರೀಶ ಕೊಂಡಪಲ್ಲಿ, ಲೈನ ಬಜಾರ್ ಸೌದಾಗರ ಚಾಳನ ಸತ್ಕಾರ ಗೋವಿಂದ ಮಾಡಲಗಿ, […]
ಬೆಳಗಾವಿ ಕೋರ್ಟ್ ನೀಡಿದ್ದ ಶಿಕ್ಷೆ ಪುರಸ್ಕರಿಸಿದ ಹೈಕೋರ್ಟ್
ಅಕ್ರಮ ಗಾಂಜಾ ಸಂಗ್ರಹಿಸಿದ್ದ ಆರೋಪ ಧಾರವಾಡ prajakiran.com : ಅಕ್ರಮವಾಗಿ ಗಾಂಜಾ ಸಂಗ್ರಹ ಆರೋಪದಡಿ ಬಂಧಿಸಲಾಗಿದ್ದ ಅಪರಾಧಿಗೆ ಬೆಳಗಾವಿ ಜಿಲ್ಲಾ ನ್ಯಾಯಾಲಯ ನೀಡಿದ್ದ ಶಿಕ್ಷೆಯ ಆದೇಶವನ್ನು ಧಾರವಾಡ ಹೈಕೋರ್ಟ್ ಪುರಸ್ಕರಿಸಿ ಮಹತ್ವದ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದ ಸಣ್ಣಲಕ್ಷ್ಮಪ್ಪ ದಳವಾಯಿ ಎಂಬಾತನ ತೋಟದ ಮನೆಯ ಮೇಲೆ ೨೦೦೫ರಲ್ಲಿ ದಾಳಿ ನಡೆಸಿದ್ದ ಪೊಲೀಸರು, ಆತನ ಮನೆಯಲ್ಲಿ ೧೮ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಅಲ್ಲದೆ, ಈ ಕುರಿತು ದೂರು ದಾಖಲಿಸಿಕೊಂಡು, ತನಿಖೆ ನಡೆಸಿ ಪೊಲೀಸರು […]