ಅಪರಾಧ

ಗಜೇಂದ್ರಗಡದಲ್ಲೂ ಅಕ್ರಮ ಗಾಂಜಾ ಘಾಟು : ಐವರ ಬಂಧನ

ಗಜೇಂದ್ರಗಡ (ಗದಗ) prajakiran.com : ಅಕ್ರಮ ಗಾಂಜಾ ಮಾರಾಟ ಮತ್ತು ಉತ್ಪಾದನೆ ಮಾಡುತ್ತಿದ್ದ ಐವರನ್ನು  ಬಂಧಿಸಿದ ಘಟನೆ ಪಟ್ಟಣದ ಕಡ್ಡಿಯವರ ಪ್ಲಾಟ್ ನಲ್ಲಿ ಶುಕ್ರವಾರ ನಡೆದಿದೆ. 

ಪಟ್ಟಣದ ನಿವಾಸಿಗಳಾದ  ಈರಪ್ಪ ಯಮನಪ್ಪ ರಾಠೋಡ, ವಾಸೀಮ ಅಮೀನಸಾಬ ಬಂಗಾರಗುಂಡಿ, ವೀರೇಶ ಪ್ರಭಾಕರ ಪುಡೂರ, ವಿರೇಶ ಗೋವಿಂದಪ್ಪ ದ್ಯಾವನಕೊಂಡಿ ಹಾಗೂ ಗದಗ ನಗರದ ನಿವಾಸಿ ಶಿವಕುಮಾರ ಕಾಶಪ್ಪ ಬೆಡಗೇರಿ ಬಂಧಿತ ಆರೋಪಿಗಳು.

ಈರಪ್ಪ ರಾಠೋಡ ಎಂಬುವರು ತಮ್ಮ ಮನೆಯಲ್ಲಿ ಮಾರಾಟ ಮತ್ತು ಗಾಂಜಾ ಬೆಳೆಯುತ್ತಿದ್ದರು ಎನ್ನುವ ಖಚಿತ ಮಾಹಿತಿ ಮೇರೆಗೆ ಪೋಲೀಸರು ದಾಳಿ ನಡೆಸಿದ್ದಾರೆ. 

ದಾಳಿಯ ವೇಳೆ ಬಂಧಿತ ಆರೋಪಿಗಳಿಂದ 500 ಗ್ರಾಂ ಗಾಂಜಾ ಹಾಗೂಕೆ.ಜಿ  ಹಸಿ ಗಾಂಜಾ ಮತ್ತು ಎರಡು ಬೈಕ್ ಸಹಿತ 2ಲಕ್ಷ 85ಸಾವಿರ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.

ದಾಳಿ ವೇಳೆ ಪಿಎಸ್ಐ ಗುರುಶಾಂತ ದಾಶ್ಯಾಳ, ಸಿಬ್ಬಂದಿಗಳಾದ  ಮಹೇಶ ಬಳ್ಳಾರಿ, ಸುರೇಶ ಮಂತಾ, ಹೆಚ್.ಎಲ್.ಭಜೇಂತ್ರಿ, ಸಂಗಮೇಶ ಹಲಬಾಗಿಲ, ಎಂ.ಎಚ್.ಅವಾರಿ, ಶ್ರೀಕಾಂತ ಜಂಗ್ಗಣ್ಣವರ, ಎಸ್.ಎಸ್.ಭಜೇಂತ್ರಿ, ಚಂದ್ರು ಹಾದಿಮನಿ, ಜೆ.ಬಿ.ಪೂಜಾರ, ವಿರೇಶ ಪಾಟೀಲ ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *