*ಫೀಸ್ ಕಟ್ಟಿ ಎಂದು ಪೀಡಿಸುವ ಶಾಲೆಗಳಿಗೆ ಸುರೇಶಕುಮಾರ್ ಖಡಕ್ ವಾರ್ನಿಂಗ್*
ಬೆಂಗಳೂರು prajakiran.com : ಖಾಸಗಿ ಶಾಲೆಗಳು ಕೆಲ ಫೈನಾನ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು, ಅಲ್ಲಿಂದ ಸಾಲ ಪಡೆದು ಫೀಸ್ ಕಟ್ಟುವಂತೆ ಪೋಷಕರಿಗೆ ಶಾಲೆಗಳು ಒತ್ತಡ ಹೇರುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಈ ಆರೋಪ ನಿಜವಾದರೆ ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬಡ್ಡಿಗೆ ಹಣ ಪಡೆದು ಫೀಸ್ ಕಟ್ಟಿ ಎಂದು ಶಾಲೆಗಳು ಒತ್ತಡ ಹಾಕಿದರೆ ದೂರು ನೀಡಿ. ಅಂಥ ಶಾಲೆಗಳ ವಿರುದ್ಧ ಸಮರ ಸಾರುತ್ತೇವೆ ಎಂದಿದ್ದಾರೆ.
ಇನ್ನು ಶುಲ್ಕ ಕಟ್ಟಿಲ್ಲ ಎಂದು ಆನ್ಲೈನ್ ತರಗತಿಯನ್ನು ನಿಲ್ಲಿಸುವಂತಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಆನ್ಲೈನ್ ಕ್ಲಾಸ್ ನಿಲ್ಲಿಸಿದರೆ ಅಂತವರ ವಿರುದ್ಧವೂ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಅಭಯ ನೀಡಿದರು.