education minister sureshkumar
ರಾಜ್ಯ

ನವೆಂಬರ್ ಅಂತ್ಯದವರೆಗೆ ಶಾಲೆ ಆರಂಭ ಪ್ರಶ್ನೆಯೇ ಇಲ್ಲ ಎಂದ ಸುರೇಶಕುಮಾರ್

ಬೆಂಗಳೂರು prajakiran.com : ರಾಜ್ಯದ 40 ಶಾಸಕರ ಅಭಿಪ್ರಾಯವನ್ನು ಸ್ವತಃ ಭೇಟಿ ಮಾಡಿ ಸಂಗ್ರಹಿಸಿದ್ದೇನೆ. ರಾಜ್ಯದ ಬಹುತೇಕ ಶಾಸಕರು ನವೆಂಬರ್ ಅಂತ್ಯದವರೆಗೆ ಶಾಲೆ ಆರಂಭಿಸುವುದು ಬೇಡ ಎಂದಿದ್ದಾರೆ.

ಹೀಗಾಗಿ ರಾಜ್ಯದ ಶಿಕ್ಷಣ ಇಲಾಖೆ ಮುಂದೆ ಸದ್ಯಕ್ಕೆ ಶಾಲೆ ಆರಂಭಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬರುವ ಶುಕ್ರವಾರ ಹಾಗೂ ಸೋಮವಾರ ಮಹತ್ವದ ಸಭೆ ನಡೆಸಲಾಗುವುದು. ಸಭೆಯಲ್ಲಿ ಶಿಕ್ಷಣ ತಜ್ಞರ, ಬಿಇಒ ಜೊತೆಗೆ ಸಮಾಲೋಚಿಸಿ, ಆನಂತ ನಿರ್ಧಾರ ಪ್ರಕಟಿಸಲಾಗುವುದು ಎಂದರು.

ಎಲ್ಲಾ  ಶಾಸಕರಅಭಿಪ್ರಾಯವನ್ನು ಕ್ರೂಢಿಕರಿಸಲಾಗುವುದು. ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವಂತೆ ಯಾವುದೇ ಸಮಿತಿ ವರದಿ ಕೊಟ್ಟಿಲ್ಲ. ಅಲ್ಲದೆ, ನಾವು ಕೂಡ ಈ ಬಗ್ಗೆ ಯಾರಿಗೂ ಸಲಹೆ ಕೇಳಿಲ್ಲ ಎಂದರು.

ನಮಗೆ ಶಾಲೆ ಆರಂಭಕ್ಕೆ ಯಾವುದೇ ಧಾವಂತ, ಅವಸರವಿಲ್ಲ. ಶಾಲೆ ಆರಂಭದ ಅಭಿಪ್ರಾಯ ಕೇಳಿ ಪತ್ರ ಬರೆದಿದ್ದೇನೆ ಹೊರತು ತರಾತುರಿ ನಿರ್ಧಾರ ಕೈಗೊಳ್ಳಲ್ಲ. ಪೋಷಕರ ಕಾಳಜಿ ಮನಸ್ಸಿನಲ್ಲಿಟ್ಟುಕೊಂಡು ಹೆಜ್ಜೆ ಇಡುತ್ತೇವೆ ಎಂದು ಸುರೇಶಕುಮಾರ ವಿವರಿಸಿದರು.

ಸದ್ಯದಲ್ಲಿ ಶಾಲೆ, ಕಾಲೇಜು ಆರಂಭವಿಲ್ಲ.  ಯಾವುದೇ ಆತಂಕ ಬೇಡ. ಈ ಬಗ್ಗೆ ಇನ್ನೂ ದಿನಾಂಕ ನಿರ್ಧಾರವಾಗಿಲ್ಲ.   ಎಲ್ಲಾ ಪೋಷಕರು ಕೂಡ ತಮ್ಮ ಅಭಿಪ್ರಾಯ ಕೊಡಬಹುದು ಎಂದು ಶಿಕ್ಷಣ ಸಚಿವ ಸುರೇಶಕುಮಾರ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *