ರಾಜ್ಯ

ಬೆಂಗಳೂರಿನಲ್ಲಿ 26, ಬೆಳಗಾವಿಯಲ್ಲಿ 7 ಜನರ ಸಾಮೂಹಿಕ ಅಂತ್ಯ ಸಂಸ್ಕಾರ…..!

ಬೆಂಗಳೂರು/ಬೆಳಗಾವಿ prajakiran.com : ರಾಜ್ಯದ ರಾಜಧಾನಿ ಬೆಂಗಳೂರು ಅಕ್ಷರಶಃ ಕರೋನಾ ಪಾಸಿಟಿವ್ ನಿಂದ ನಲುಗಿ ಹೋಗಿದೆ.

ಅನೇಕರಿಗೆ ಸಕಾಲಕ್ಕೆ ಆಕ್ಸಿಜನ್ ಸಿಗದಿದ್ದರೆ, ಇನ್ನೂ ಕೆಲವರಿಗೆ ವೆಂಟಿಲೇಟರ್ ಸೌಲಭ್ಯ ಸಿಗುತ್ತಿಲ್ಲ. ಇದೇ ವೇಳೆ ರೆಮಿಡೆಸಿವರ್ ಕಾಳ ಸಂತೆಯಲ್ಲಿ ಭರ್ಜರಿ ಮಾರಾಟವಾಗುತ್ತಿದೆ.

ಆದರೆ ಸರ್ಕಾರದ ಆಸ್ಪತ್ರೆಗೆ ಮತ್ತು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ.
ಹೀಗಾಗಿ ಅನೇಕ ಬಡಜೀವಗಳು ಸಾವಿನ ದವಡೆಗೆ ಬಂದು ನಿಲ್ಲುತ್ತಿವೆ.

ಇಂತಹ ಕರುಣಾಜನಕ ಸ್ಥಿತಿಯನ್ನು ಕರುನಾಡು ಹಿಂದೆಂದೂ ಕಂಡು ಕೇಳಿರಲಿಲ್ಲ.

ಸತ್ತವರಿಗೆ ವ್ಯವಸ್ಥಿತ ಶವಾಗಾರಗಳು ಕೂಡ ಸಿಗದೆ ಜನ ಪರದಾಡುವಂತಾಗಿದೆ.
ಅನೇಕರು ಕೈ ಚೆಲ್ಲಿ ಕುಳಿತಿದ್ದಾರೆ.

ಇಂತಹ ದಯನೀಯ ಪರಿಸ್ಥಿತಿ ಬೆಂಗಳೂರಿನ ತಾವರಕೇರಿ ತಾತ್ಕಾಲಿಕ ರುದ್ರಭೂಮಿಯಲ್ಲಿ ಕಂಡು ಬಂದಿದೆ.

ಏಕಕಾಲದಲ್ಲಿ 26 ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ ನಡೆಯಿತು.

ಕೆಲವರ ಆಕ್ರಂದನ‌ಮುಗಿಲು ಮುಟ್ಟಿತ್ತು. ಇನ್ನೂ ಕೆಲವರಿಗೆ ಸಂಬಂಧಿಗಳೆ ಇಲ್ಲದೆ ವಾಹನ ಚಾಲಕರೆ ವಿಧಿ ವಿಧಾನ ನೆರವೇರಿಸಿದರು.

ಅವರಿಗೆ ಬಂಧು ಬಳಗವಿದ್ದರೂ ತನ್ನವರು ಯಾರೂ ಇಲ್ಲ. ಸಂಬಂಧಿಕರಿಲ್ಲ, ಅಳುವಿಲ್ಲ, ಆಕ್ರಂದನವಿಲ್ಲ.. ಮೌನವಾಗಿಯೇ ಸುಟ್ಟು ಬೂದಿಯಾಗುತ್ತಿದ್ದಾನೆ‌. ಇದು ವಿಧಿಯ ಆಟವಲ್ಲದೆ ಬೇರೆನೂ ಇಲ್ಲ.

ಇದು ಬೆಂಗಳೂರಿನ ತಾವರೆಕೆರೆ ಬಯಲು ಸ್ಮಶಾನದಲ್ಲಿ ಕಂಡು ಬಂದರೆ ಬೆಳಗಾವಿ ಜಿಲ್ಲೆಯಲ್ಲಿ ಕೂಡ ಶುಕ್ರವಾರ ಒಂದೇ ದಿನ 7 ಜನರ ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಲಾಯಿತು.

ನಿನ್ನೇ ಕುಂದಾನಗರಿ ಬೆಳಗಾವಿಯಲ್ಲಿ 26 ಜನ ಸಾವನ್ನಪ್ಪಿದರು. ಅವರ ಪೈಕಿ 7 ಜನರ ಅಂತ್ಯಕ್ರಿಯೆ ಸಾಮೂಹಿಕವಾಗಿ ನಡೆದಿದೆ.

ಹೀಗೆ ರಾಜ್ಯದಲ್ಲಿ ಕರೋನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ವುತ್ತಿರುವುದು ಜನರನ್ನು ಬೆಚ್ವಿಬೀಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *