ಧಾರವಾಡ prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಕರಣದ ಸಂತ್ರಸ್ತ ತಮ್ಮ ಮಗಳನ್ನು ಹುಡುಕಿಕೊಡಿ ಎಂದು ಆಕೆಯ ಪೋಷಕರು ಸಲ್ಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಸೋಮವಾರ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠವು ಇತ್ಯರ್ಥ ಪಡಿಸಿದೆ.
ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ
ಕೃಷ್ಣ ದೀಕ್ಷಿತ್ ಹಾಗೂ ಪ್ರದೀಪ ಸಿಂಗ್ ಯರೂರು ಅವರ ನೇತೃತ್ವದ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ಯುವತಿಯು ವೀಡಿಯೋ ಕಾನ್ಫರೆನ್ಸ್ ಮೂಲಕ ಧಾರವಾಡ ಹೈಕೋರ್ಟ್ ಮುಂದೆ ಹಾಜರ್ ಆದರು.
ಅಲ್ಲದೆ, ಪ್ರಕರಣದ ವಿಚಾರಣೆ ಮುಗಿದ ಬಳಿಕ ಭೇಟಿ ಮಾಡುವುದಾಗಿ ಹೇಳಿದರು.
ಯುವತಿ ನನಗೆ ಪೋಲೀಸರು ಹಾಗೂ ಪ್ರಭಾವಿಗಳಿಂದ ಯಾವುದೇ ಒತ್ತಡ ಇಲ್ಲ,.
ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿ ಇದೆ. ಅದು ಮುಗಿದ ಬಳಿಕ ಪೋಷಕರಿಗೆ ಭೇಟಿ ಆಗುತ್ತೇನೆ ಎಂದು ಉತ್ತರಿಸಿದ್ದರಿಂದ ಯುವತಿ ತಂದೆ ಪ್ರಕಾಶ್ ಕಂಚೇರಿ ಅವರು ಧಾರವಾಡ ಹೈಕೋರ್ಟ್ ಗೆ ಸಲ್ಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಇತ್ಯರ್ಥ ಪಡಿಸಿದರು.