ರಾಜ್ಯ

ಧಾರವಾಡ ಪಶ್ಚಿಮದಲ್ಲಿ ಮತ್ತೆ ಬಿಜೆಪಿ 50 ಸಾವಿರ ಮತಗಳ ಅಂತರದಿಂದ ಗೆಲುವು: ಅರವಿಂದ ಬೆಲ್ಲದ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರು ಸೋಮವಾರ ಅಂಬೇಡ್ಕರ್ ನಗರ, ಲಿಡಕರ್ ಕಾಲನಿ,ಅರವಿಂದ ನಗರ ಸೇರಿದಂತೆ ಧಾರವಾಡ ‌ನಗರದ ವಿವಿಧ ಭಾಗಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಮಿಕರಿಗಾಗಿ ರೂಪಿಸಿರುವ ಸೌಲಭ್ಯಗಳು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಅಭಿವೃದ್ಧಿಗಳನ್ನು ಬೆಲ್ಲದ ವಿವರಿಸಿದರು

ಇದೇ ಸಂದರ್ಭದಲ್ಲಿ ಹು-ಧಾ ಪಶ್ಚಿಮ ಕ್ಷೇತ್ರದಲ್ಲಿನ ಕೈಗಾರಿಕಾ ವಲಯದಲ್ಲಿನ ಅಭಿವೃದ್ಧಿ ಮತ್ತು ಅನುಕೂಲಗಳ ಬಗ್ಗೆ ಕಾರ್ಮಿರ ಜೊತೆ ಮುಕ್ತವಾಗಿ ಚರ್ಚಿಸಿದರು.

ಕಾರ್ಮಿಕರ ಕಲ್ಯಾಣಕ್ಕೆ ಭವಿಷ್ಯದಲ್ಲಿ ಕೈಕೊಳ್ಳಬೇಕಾದ ಕಾರ್ಯಕ್ರಮಗಳ ಮಾಹಿತಿ ಪಡೆದ ಅವರು, ಕಾರ್ಮಿಕರ ಹಿತರಕ್ಷಣೆ ಸಂಬಂಧ ಸದಾ ಕಾಳಜಿವಹಿಸುವುದಾಗಿ ಭರವಸೆ ನೀಡಿದರು.

ಅಲ್ಲದೆ, ತಾವು ಕ್ಷೇತ್ರದ ವ್ಯಾಪ್ತಿಯಲ್ಲಿ ಕೈ ಗೊಂಡ ಅಭಿವೃದ್ಧಿ ಯೋಜನೆ ತಮಗೆ ಶ್ರೀರಕ್ಷೆಯಾಗಿದ್ದು, ಈ ಬಾರಿ ಮತ್ತೆ ಗೆಲುವಿನ‌ಅಂತರ 50 ಸಾವಿರ ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಇದೇ ವೇಳೆ ಸ್ಮೃತಿ ಬೆಲ್ಲದರಿಂದ ಭರ್ಜರಿ ಪ್ರಚಾರ ಧಾರವಾಡ ಪಶ್ಚಿಮ 74ರ ಕ್ಷೇತ್ರದ ಶ್ರೀನಗರ,ವಿಜಯನಗರದ ವಾರ್ಡ ಗಳಲ್ಲಿ ಅರವಿಂದ ಬೆಲ್ಲದ ಅವರ ಧರ್ಮ ಪತ್ನಿ ಯಾದ ಶ್ರೀ ಮತಿ ಸ್ಮೃತಿ ಅರವಿಂದ ಬೆಲ್ಲದ ಅವರು ಮಹಿಳಾ ಮೋರ್ಚಾದ ಮಹಿಳೆಯರ ಜೊತೆಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *