ರಾಜ್ಯ

ಧಾರವಾಡದ ಹಿರಿಯ ಛಾಯಾಗ್ರಾಹಕ ಆರ್. ಕೆ. ಗೆ ಪತ್ರಕರ್ತರ ಸಂಘದ ಪ್ರಶಸ್ತಿ

ಧಾರವಾಡ ಪ್ರಜಾಕಿರಣ.ಕಾಮ್ :
ಸಂಯುಕ್ತ ಕರ್ನಾಟಕ ಪತ್ರಿಕೆಯ ಧಾರವಾಡದ ಹಿರಿಯ ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿ@ ಆರ್ ಕೆ ಅವರ ಭಾವನಾತ್ಮಕ ಹಾಗೂ ಮನಮಿಡಿಯುವ ಛಾಯಾಚಿತ್ರಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಧಾರವಾಡ ಜಿಲ್ಲಾ ಘಟಕ ನೀಡುವ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.

ಹಿರಿಯ ಸಾಹಿತಿ ದಿ. ಎಂ.ಡಿ.ಗೋಗೇರಿ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಯ್ಕೆ ಸಮಿತಿ ಅವರ ದಿವ್ಯಾಂಗ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಗೆ ಬಂದಾಗ ಸೆರೆ ಹಿಡಿದ ಚಿತ್ರಕ್ಕೆ ಮನಸೋತಿದೆ.

ಅವರಿಗೆ ಪ್ರಜಾಕಿರಣ. ಕಾಮ್ ಸಂಸ್ಥೆಯ ಪ್ರಧಾನ ಸಂಪಾದಕರಾದ ನಾಗರಾಜ ಕಿರಣಗಿ ಅವರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.

ಅವರ ಎರಡು ದಶಕಗಳ ಛಾಯಾಗ್ರಹಣ ಶೈಲಿ ಮನಗಂಡು ಅವರ ಆತ್ಮೀಯ ಒಡನಾಡಿಯಾಗಿರುವ ನನಗೆ ಅವರ ಬಗ್ಗೆ ಎಲ್ಲಿಲ್ಲದ ಅಭಿಮಾನವಿದೆ. ಅವರು ಪ್ರತಿಯೊಬ್ಬರ ನೋವಿಗೆ ಸ್ಪಂದಿಸುವ ರೀತಿ ವರ್ಣಿಸಲು ಅಸಾಧ್ಯ.

ಓದುವ ವಿದ್ಯಾರ್ಥಿಗಳಿಗೆ ಅದರಲ್ಲೂ ಹಸಿದ ಹೊಟ್ಟೆಗೆ ಅನ್ನ ನೀಡಿ, ಆಶ್ರಯ ಕಲ್ಪಿಸುವ ಕಲ್ಪತರು, ಕಾಮಧೇನು ಎಂದರೆ ತಪ್ಪಾಗಲಾರದು. ಧಾರವಾಡದ ಹೆಮ್ಮೆ ಆರ್. ಕೆ. ಸರ್. ಎಂದು ಬಣ್ಣಿಸಿದ್ದಾರೆ.

ಅವರಿಗೆ ಆ. 13ರಂದು ಬೆಳಗ್ಗೆ 11ಗಂಟೆಗೆ ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *