ರಾಜ್ಯ

ಬಡವರ ಮಕ್ಕಳು ವಿಧಾನಸೌಧಕ್ಕೆ ಹೋಗಬೇಕೆಂಬ ಕಿಚ್ಚು ಇನ್ನು ಜೀವಂತವಿದೆ, ಮುಂದೊಂದು ದಿನ ಸಾಕಾರವಾಗಲಿದೆ ಎಂದ ಬಸವರಾಜ‌ ಕೊರವರ

ಧಾರವಾಡ ಪ್ರಜಾಕಿರಣ.ಕಾಮ್ ಬಡವರ ಮಕ್ಕಳು ವಿಧಾನಸೌಧಕ್ಕೆ ಹೋಗಬೇಕು ಎಂಬ ಆ ಹೋರಾಟದ ಕಿಚ್ಚು ಇನ್ನು ನನ್ನ ಏದೆಯೊಳಗೆ ಜೀವಂತವಿದೆ.‌

ಮುಂದೊಂದು ದಿನ ಅದು ಸಾಕಾರವಾಗಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು.

ಅವರು ನಿನ್ನೆ ಉಪ್ಪಿಬೆಟಗೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆಗೆ ವೇದಿಕೆ ಹಂಚಿಕೊಂಡು ಬಿಜೆಪಿ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

 ನಾನು ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದು ನಿಜ.ಆದರೆ ಪ್ರಹ್ಲಾದ ಜೋಶಿ ಹಾಗೂ ಗುರುನಾಥ ಗೌಡರ ಮತ್ತು ಅನೇಕರ ಒತ್ತಡಕ್ಕೆ ಮಣಿದು ಕಣದಿಂದ ಹಿಂದೆ ಸರಿದಿದ್ದೇನೆ. 

ಮತ್ತೆ ಧಾರವಾಡದಲ್ಲಿ ಗೂಂಡಾ ವ್ಯವಸ್ಥೆ ಬರಬಾರದು ಎಂದು ನಾಮಪತ್ರ ವಾಪಸ್ ಪಡೆದು ಬಿಜೆಪಿಗೆ ನಾನು ಬೆಂಬಲ ನೀಡಿದ್ದೇನೆ.

ಯೋಗೀಶಗೌಡ ಗೌಡರ ಹತ್ಯೆಗೆ ನ್ಯಾಯ ಸಿಗಬೇಕು ಎಂಬ ಒಂದೇ ಒಂದು ಕಾರಣದಿಂದ ನಾಮಪತ್ರ ವಾಪಸ್ ಪಡೆದಿದ್ದೇನೆ ಎಂದರು.

ಇವತ್ತು ವಿನಯ್ ಕುಲಕರ್ಣಿ ಅವರು ನನ್ನ ಮೇಲೆ ಷಡ್ಯಂತ್ರ ಮಾಡಿದ್ದಾರೆ ಎನ್ನುತ್ತಾರೆ. ಇಲ್ಲಿರುವ ಯಾರೂ ಅವರ ಮೇಲೆ ಷಡ್ಯಂತ್ರ ಮಾಡಿಲ್ಲ.

ನ್ಯಾಯಾಲಯವೇ ಎಲ್ಲಾ ವಿಷಯಗಳ ಬಗ್ಗೆ ವಿಚಾರಣೆ ಮಾಡಿ ನ್ಯಾಯಾಂಗ ವ್ಯವಸ್ಥೆ ಅವರಿಗೆ ನಿರ್ಬಂಧ ಹೇರಿದೆ.

ನೀವು ಆರೋಪ ಮುಕ್ತರಾಗಿ ಧಾರವಾಡಕ್ಕೆ ಬನ್ನಿ ನಾವು ಸ್ವಾಗತಿಸುತ್ತೇವೆ. ಆದರೆ, ಆರೋಪ ಮುಕ್ತರಾಗದೇ ವಿನಯ್ ಕುಲಕರ್ಣಿ ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಸರಿಯಲ್ಲ

ಕೊಲೆಯಾದ ಯೋಗೀಶಗೌಡರ ಕುಟುಂಬದ ಮೇಲೆ ಅನುಕಂಪ ಹುಟ್ಟೇಕೇ ಹೊರತು, ಕೊಲೆ ಅರೊಪ ಹೊತ್ತ ವ್ಯಕ್ತಿಯ ಮೇಲೆ ಅನುಕಂಪ ಹುಟ್ಟಬಾರದು ಎಂದರು.

ಒಂದು ವೇಳೆ ಆ ಪರಿಸ್ಥಿತಿ ಸನ್ನಿವೇಶ ನಿರ್ಮಾಣ ಆದರೆ ಅದು ಪ್ರಜಾಪ್ರಭುತ್ವ ಕಗ್ಗೊಲೆ ಆಗಲಿದೆ.

ಹೀಗಾಗಿ ಮತದಾರರು ಹಲವು ಬಾರಿ ವಿಚಾರ ಮಾಡಿ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಬಡವರ ಮನೆ ಮಗ ಬಸವರಾಜ ಕೊರವರ ಮನವಿ ಮಾಡಿದರು. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *