ಧಾರವಾಡ ಪ್ರಜಾಕಿರಣ.ಕಾಮ್ : ದೇಶ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಶಿಕ್ಷಕ ವೃಂದದ ಪಾತ್ರ ಬಹಳ ಮಹತ್ವದ್ದು ಎಂದು ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಹೇಳಿದರು.
ಶುಕ್ರವಾರ ಇಲ್ಲಿನ ಮಾಳಮಡ್ಡಿಯ ಕೆ.ಇ.ಬೋರ್ಡ ಸಂಸ್ಥೆಯ ಆವರಣದಲ್ಲಿ ಜರುಗಿದ ಸಭೆಯಲ್ಲಿ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿನ ಯುವ ಸಮುದಾಯದ ಮೇಲೆ ಅಪಾರ ವಿಶ್ವಾಸ ಹೊಂದಿದ್ದಾರೆ.
ದೇಶದಲ್ಲಿನ ಯುವಕರು ಕೇವಲ ಅಂಕಿ ಸಂಖ್ಯೆಗೆ ಮಾತ್ರವಲ್ಲದೇ ಅಮೂಲ್ಯ ಮಾನವ ಸಂಪನ್ಮೂಲ ಎಂದು ಭಾವಿಸಿ, ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ.
ಈ ಮಾನವ ಸಂಪನ್ಮೂಲವೇ ಭವಿಷ್ಯದಲ್ಲಿ ಸಮೃದ್ಧ ಮತ್ತು ಸಮರ್ಥ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಇಂತಹ ಕೌಶಲ್ಯಭರಿತ ಮತ್ತು ಸುಸಂಸ್ಕೃತ ಯುವ ಸಮುದಾಯನ್ನು ಸಿದ್ಧಪಡಿಸುವ ಹೊಣೆ ಶಿಕ್ಷಕರದ್ದಾಗಿದೆ.
ಈ ಪ್ರಯತ್ನದಲ್ಲಿ ಶಿಕ್ಷಕರ ಜೊತೆ ಇದ್ದು ಅಗತ್ಯ ಸಹಕಾರ ನೀಡುವುದಾಗಿ ಭರವಸೆಯಿತ್ತರು.
ಹು-ಧಾ ಪಶ್ಚಿಮ ಕ್ಷೇತ್ರದ ಅಭಿವೃದ್ಧಿ ಹಾಗೂ ಧಾರವಾಡನ್ನು ಸಮೃದ್ಧ ವಿದ್ಯಾಕಾಶಿಯನ್ನಾಗಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಬೆಲ್ಲದ ಹೇಳಿದರು.
ಶ್ರೀಕಾಂತ ಪಾಟೀಲ, ಮೋಹನ ಸಿದ್ಧಾಂತಿ, ಜಿ.ಆರ್.ಭಟ್ ಮತ್ತು ಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು